ಬೆಂಗಳೂರು : ಭಾರತದಲ್ಲಿ ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ ಹಿರಿಯ ಸಂಶೋಧಕ, ಇತಿಹಾಸ ತಜ್ನ ಡಾ ಎಂ ಚಿದಾನಂದಮೂರ್ತಿ ಅವರು, ಈ ದೌರ್ಜನ್ಯವನ್ನು ಮಹಾತ್ಮ ಗಾಂಧೀಜಿ ಕಂಡಿದ್ದರೆ, ಅಹಿಂಸಾ ಪ್ರತಿಪಾದಕರಾಗಿದ್ದ ಅವರೂ ಹಿಂಸೆಗಿಳಿಯುತ್ತಿದ್ದರು ಅಭಿಪ್ರಾಯಪಟ್ಟಿದ್ದಾರೆ.
ಅರಮನೆ ರಸ್ತೆಯಲ್ಲಿರುವ ಟಿ.ಎಚ್. ವೆಂಕಟರಮಣಪ್ಪ ಕಲ್ಯಾಣ ಮಂದಿರದಲ್ಲಿ ಶನಿವಾರ ನಡೆದ ಅಖಿಲ ಭಾರತ ಹಿಂದು ಮಹಾಸಭಾ ರಾಜ್ಯ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ದಿನೇದಿನೆ ಕುಗ್ಗುತ್ತಿದೆ. ಭಾರತದಲ್ಲಿ ಹಿಂದುಗಳ ಸಂಖ್ಯೆ ಶೇ.7ರಷ್ಟು ಬೆಳವಣಿಗೆ ಕಂಡರೆ ಮುಸ್ಲಿಮರ ಸಂಖ್ಯೆ ಶೇ. 8ರ ವೇಗದಲ್ಲಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆಯೇ ಎಂಬ ಆತಂಕ ಉಂಟಾಗುತ್ತದೆ. ಭಾರತ, ಭಾರತವಾಗಿಯೇ ಉಳಿಯಬೇಕೆಂದರೆ ಹಿಂದು ಧರ್ಮದ ರಕ್ಷಣೆಯಾಗಬೇಕು. ಅಹಿಂಸೆ ಪರಮ ಧರ್ಮ ಎಂದು ಹೇಳಿದರೂ ಧರ್ಮಕ್ಕೆ ಕುತ್ತು ಬಂದಾಗ ಅರದ ಉಳಿವಿಗಾಗಿ ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ. ಧರ್ಮದ ರಕ್ಷಣೆಗಾಗಿ ಹಿರಿಯಲ್ಲರೂ ಹೋರಾಡಬೇಕು ಎಂದರು.
ಅಧ್ಯಕ್ಷರಾಗಿ ನಾ. ಸುಬ್ರಹ್ಮಣ್ಯರಾಜು, ಕಾರ್ಯಾಧ್ಯಕ್ಷರಾಗಿ ರಾಜೇಶ್ ಪವಿತ್ರನ್ ಅಧಿಕಾರ ಸ್ವೀಕರಿಸಿದರು.