ನವದೆಹಲಿ : ಹೊಸದಾಗಿ ರಚನೆಯಾಗಿರುವ ನೀತಿ(ಎನ್.ಐ.ಟಿ.ಐ) ಆಯೋಗಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಖ್ಯಾತ ಅರ್ಥಶಾಸ್ತ್ರಜ್ನ ಅರವಿಂದ್ ಪನಗಾರಿಯಾ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಯೋಜನಾ ಆಯೋಗದ ಬದಲು, ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಜ.1ರಂದು ನೀತಿ ಆಯೋಗವನ್ನು ಜಾರಿಗೆ ತಂದಿತ್ತು. ಜ.5ರಂದು ಆಯೋಗಕ್ಕೆ ಉಪಾಧ್ಯಕ್ಷರಾಗಿ ಖ್ಯಾತ ಆರ್ಥಿಕ ತಜ್ಞ ಅರವಿಂದ ಪನಗರಿಯಾ ಅವರನ್ನು ನೇಮಕ ಮಾಡಲಾಗಿತ್ತು.
ಇನ್ನುಳಿದ ಇಬ್ಬರು ಪೂರ್ಣಾವಧಿ ಸದಸ್ಯರಾದ ಆರ್ಥಿಕ ತಜ್ಞ ಬೈಬೆಕ್ ಡೆಬ್ರಾಯ್ ಮತ್ತು ವಿ.ಕೆ.ಸಾರಸ್ವತ್ ಅಧಿಕಾರ ಸ್ವೀಕರಿಸುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.
ಉಪಾಧ್ಯಕ್ಷರು, ಕೇಂದ್ರ ಸಚಿವರನ್ನೊಳಗೊಂಡ 4 ಪದನಿಮಿತ್ತ ಅಧಿಕಾರಿಗಳು, ಮೂವರು ವಿಶೇಷ ಆಹ್ವಾನಿತರನ್ನು ಈಚೆಗೆ ಆಯ್ಕೆ ಮಾಡಲಾಗಿತ್ತು.