ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೀತಿ ಆಯೋಗಕ್ಕೆ ಉಪಾಧ್ಯಕ್ಷರು, ಸದಸ್ಯರನ್ನು ಜ.5ರಂದು ನೇಮಕ ಮಾಡಿದ್ದಾರೆ.
ಯೋಜನಾ ಆಯೋಗದ ಬದಲು ಕಳೆದ 4 ದಿನಗಳ ಹಿಂದೆ ನೀತಿ ಆಯೋಗವನ್ನು ಅಸ್ಥಿತ್ವಕ್ಕೆ ತರಲಾಗಿತ್ತು. ಈ ಆಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕಗೊಳಿಸಿದ್ದು ನೂತನ ಸಂಸ್ಥೆಗೆ ಖ್ಯಾತ ಅರ್ಥಶಾಸ್ತ್ರಜ್ನ ಅರವಿಂದ್ ಪನಗಾರಿಯಾ ಅವರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆಜೀವ ಸದಸ್ಯತ್ವಕ್ಕೆ ವಿವೇಕ್ ದೆಬ್ರಾಯ್, ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿ ವಿ.ಕೆ ಸಾರಸ್ವತ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುರೇಶ್ ಪ್ರಭು, ರಾಧಾಮೋಹನ್ ಸಿಂಗ್, ಆಯ್ಕೆಯಾಗಿದ್ದಾರೆ. ಇದೇ ವೇಳೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸ್ಮೃತಿ ಇರಾನಿ ಅವರನ್ನು ವಿಶೇಷ ಆಹ್ವಾನಿತರಾಗಿ ನೇಮಕಗೊಂಡಿದ್ದಾರೆ.
ನೀತಿ ಆಯೋಗದ ಮುಖ್ಯಸ್ಥರಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರ್ಯನಿರ್ವಹಿಸಲಿದ್ದಾರೆ. ಉಪಾಧ್ಯಕ್ಷ, ಸದಸ್ಯರ ನೇಮಕಾತಿ ನಡೆದಿದ್ದು ಜ.1ರಂದು ಅಸ್ಥಿತ್ವಕ್ಕೆ ಬಂದಿದ್ದ ನೂತನ ಆಯೋಗದ ಕಾರ್ಯಪಡೆ ಅಸ್ಥಿತ್ವಕ್ಕೆ ಬಂದಿದೆ. ನೀತಿ ಆಯೋಗದಲ್ಲಿ ಐವರು ಸದಸ್ಯರಿಗೆ ಆಜೀವ ಸ್ಥಾನಮಾನ ನೀಡಲಾಗಿದ್ದು, ಐವರಲ್ಲಿ ನಾಲ್ವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ.
ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ದಿನ ಯೋಜನಾ ಆಯೋಗದ ಬದಲು ಆಧುನಿಕ ಸಂಸ್ಥೆಯೊಂದನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.