ನವದೆಹಲಿ : 'ಉತ್ತರ ಪ್ರದೇಶ' ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮಗೆ ನೀಡಲು ಉದ್ದೇಶಿಸಲಾಗಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ನಿರಾಕರಿಸಿದ್ದಾರೆ.
ಉತ್ತರ ಪ್ರದೇಶ ತಾಂತ್ರಿಕ ವಿಶ್ವವಿದ್ಯಾನಿಲಯ (ಯುಟಿಪಿಯು) ಯುಟಿಪಿಯು ಜನವರಿ 12ರಂದು ನಡೆಯುವ ಘಟಿಕೋತ್ಸವದಲ್ಲಿ ಸಿ ಎಂ ಅವರಿಗೆ ಡಾಕ್ಟರೇಟ್ ಪ್ರಧಾನ ಮಾಡಲು ಉದ್ದೇಶಿಸಿತ್ತು.
ಈ ಬಗ್ಗೆ ಮಾಧ್ಯಮ ವರದಿಗಳನ್ನು ಗಮನಿಸಿರುವ ಅಖಿಲೇಶ್ ಯಾದವ್, ಕೃತಜ್ಞತೆ ಅರ್ಪಿಸಿದ್ದು, ಗೌರವ ಡಾಕ್ಟರೇಟ್ ನ್ನು ನಿರಾಕರಿಸಿದ್ದಾರೆ. ಈ ಹಿಂದೆಯೇ ಇಂತಹ ಪದವಿಗಳನ್ನು ಪಡೆದಿರುವ ಅವರು, ಮತ್ತೆ ಅಂತಹ ಪದವಿಯನ್ನು ಪಡೆಯುವುದು ಸರಿಯಲ್ಲ ಎಂದೆನಿಸಿದೆ ಅವರಿಗೆ" ಎಂದು ಮುಖ್ಯಮಂತ್ರಿಗಳ ಕಛೇರಿಯಿಂದ ಬಂದಿರುವ ಪತ್ರಿಕಾ ಹೇಳಿಕೆ ತಿಳಿಸಿದೆ.
ಜನವರಿ 3 ರಂದು ನಡೆದ ಸಭೆಯಲ್ಲಿ ಯುಟಿಪಿಯು ಶೈಕ್ಷಣಿಕ ಸಮಿತಿ ಮುಖ್ಯಮಂತ್ರಿಗಳಿಗೆ ಗೌರವ ಡಾಕ್ಟರೇಟ್ ನೀಡುವ ನಿರ್ಣಯ ಕೈಗೊಂಡಿತ್ತು.