ನವದೆಹಲಿ : ಜಮ್ಮು ವಲಯದಲ್ಲಿ ಅಂತರಾಷ್ಟ್ರೀಯ ಗಡಿಯ ಬಳಿ ಗಡಿ ಭದ್ರತಾಪಡೆಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪಾಕಿಸ್ತಾನ ಪಡೆಯ ರೇಂಜರುಗಳು ಮೃತ ಪಟ್ಟಿರುವ ಬಗ್ಗೆ ಪಾಕಿಸ್ತಾನದ ಪ್ರಸ್ತಾಪವನ್ನು ಸರ್ಕಾರ ತಿರಸ್ಕರಿಸಿದೆ.
ಅಂತರಾಷ್ಟ್ರೀಯ ಗಡಿ ಮತ್ತು ಗಡಿನಿಯಂತ್ರಣ ರೇಖೆಯಲ್ಲಿ ಶಾಂತಿ ಮತ್ತು ಪ್ರಶಾಂತತೆಯನ್ನು ಕಾಪಾಡಿಕೊಳ್ಳಲು ಪಾಕಿಸ್ತಾನ, ನಿಯಮಗಳಿಗೆ ಬದ್ಧರಾಗಬೇಕೆಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾಸ್ವರಾಜ್ ಪಾಕಿಸ್ತಾನಕ್ಕೆ ತಾಕೀತು ಮಾಡಿದ್ದಾರೆ.
ಭಾರತ ಈ ನಿಯಮಗಳನ್ನು ಸದಾ ಪಾಲಿಸುತ್ತದೆ ಎಂದು ಒತ್ತಿಹೇಳಿದ್ದಾರೆ. ಕಳೆದ ತಿಂಗಳ 31ರಂದು ಪಾಕಿಸ್ತಾನಿಗಡಿಯಲ್ಲಿನ ಚೆಕ್ಪೋಸ್ಟ್ ಒಂದರಿಂದ ಹೊಗೆ ಕಾಣಿಸಿಕೊಂಡಿದ್ದನ್ನು ಗಮನಿಸಿದ ಬಿಎಸ್ಎಫ್ ಕಾವಲು ಪಡೆಗಳು ಸೂಕ್ತ ಕ್ರಮ ಕೈಗೊಂಡವು ಈ ಘಟನೆಯಲ್ಲಿ ಭಾರತೀಯ ಭದ್ರತಾಪಡೆಯ ಒಬ್ಬ ಸಿಬ್ಬಂದಿ ಸಾವಿಗೀಡಾಗಿದ್ದು ಮತ್ತೂಬ್ಬ ಯೋಧ ಗಂಭೀರವಾಗಿ ಗಾಯಗೊಂಡಿರುವುದಾಗಿ ಆವರು ಹೇಳಿದ್ದಾರೆ.
ಈ ಕುರಿತಂತೆ ಸಚಿವರು ಪಾಕಿಸ್ತಾನದ ಪ್ರದಾನಮಂತ್ರಿಗಳ ವಿದೇಶಾಂಗ ಸಲಹೆಗಾರ ಸರ್ ತಾಜ್ ಅಜೀಜ್ ಅವರಿಗೆ ನೀಡಿರುವ ಪ್ರತ್ಯುತ್ತರದಲ್ಲಿ ಸ್ಪಷ್ಟಪಡಿಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ಮೂಲಗಲು ತಿಳಿಸಿವೆ.
ಭಾರತೀಯ ಭದ್ರತಾಪಡೆಗಳು ರಕ್ಷಣಾತ್ಮಕ ಉದೇಶದಿಂದ ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಸೈನಿಕರು ಹೆಚ್ಚಿನ ಸಾಮರ್ಥ್ಯದ ಶಸ್ತ್ರಾಸ್ರಗಳನ್ನು ಬಳಸುವ ಮೂಲಕ ದಾಳಿಯನ್ನು ತೀವೃಗೊಲಿದಾಗಿಯೂ ಮತ್ತು ಸಮೀಪದ ಜನ ವಸತಿ ಪ್ರದೇಶಗಳ ಮೇಲೂ ದಾಳಿ ನಡೆಸಿದ್ದಾಗಿಯೂ ಸುಷ್ಮಾ ಸ್ವರಾಜ್ ತಮ್ಮ ಪತ್ರದಲ್ಲಿ ಒತ್ತಿಹೆಳಿದ್ದಾರೆ.
ಉಭಯ ದೇಶಗಳ ಗಡಿಸಭೆಗೆ ಬರುವಂತೆ ಆಹ್ವಾನಿಸಿದ ನಂತರ ಇಬ್ಬರು ರೇಂಜರ್ಗಳನ್ನು ಭಾರತೀಯ ಯೋಧರು ಹತ್ಯೆ ಮಾಡಿರುವುದಾಗಿ ಸರ್ ತಾಚ್ ಅಜೀಜ್ , ಸುಷ್ಮಾ ಸ್ವರಾಜ್ ಆವರಿಗೆ ಪತ್ರ ಬರೆದ್ದಿದ್ದರು.