ಜಾರ್ಖಂಡ್ : 'ಜಾರ್ಖಂಡ್’ ನಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಸುಮಾರು 25ಕ್ಕೂ ಹೆಚ್ಚು ಬುಡಕಟ್ಟು ಜನಾಂಗದ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಪ್ರತಿಭಟನಾ ನಿರತ ಬುಡಕಟ್ಟು ಸಂಘಟನೆಗಳು 2 ದಿನ ಜಾರ್ಖಂಡ್ ಬಂದ್ ಗೆ ಕರೆ ನೀಡಿದ್ದು, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಜಾರ್ಖಂಡ್ ಬಂದ್ ಗೆ ಸರ್ನಾ ಪ್ರಾರ್ಥನಾ ಸಭಾ, ಆದಿವಾಸಿ ಛಾತ್ರಾ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.
ರಾಜ್ಯದ ಜನತೆಗೆ ಬಂದ್ ಗೆ ಬೆಂಬಲಿಸುವಂತೆ ಬುಡಕಟ್ಟು ಸಂಘಟನೆಗಳು ಮನವಿ ಮಾಡಿವೆ. ಜಾರ್ಖಂಡ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿದ್ದು, ಜಾರ್ಖಂಡ್ ನ ಬುಡಕಟ್ಟು ಜನಾಂಗಕ್ಕೆ ಸೇರದ ರಘುಬರ್ ದಾಸ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಾರ್ಖಂಡ್ ರಾಜ್ಯಾದ್ಯಂತ ಬುಡಕಟ್ಟು ಜನರ ಪ್ರತಿಭಟನೆ ಭುಗಿಲೆದ್ದಿದೆ.