ರಾಂಚಿ : ಸ್ಪಷ್ಟ ಬಹುಮತವಿರದೆ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ನ ಬೆಂಬಲದೊಂದಿಗೆ ಸರ್ಕಾರ ನಡೆಸುತ್ತಿದ್ದ ಬಿಜೆಪಿ ಜಾರ್ಖಂಡ್ನಲ್ಲಿ ಆಪರೇಷನ್ ಕಮಲದ ಮೂಲಕ ಬಹುಮತ ಪಡೆದುಕೊಂಡಿದೆ. ಜಾರ್ಖಂಡ್ ವಿಕಾಸ್ ಮೋರ್ಚಾ(ಪ್ರಜಾತಾಂತ್ರಿಕ್ )ದ 6 ಮಂದಿ ಶಾಸಕರು ಆಡಳಿತ ಪಕ್ಷವಾದ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಸೇರ್ಪಡೆಯಾಗುವ ಮುನ್ನ 6 ಶಾಸಕರು ವಿಧಾನಸಭೆಯಲ್ಲಿ ಆಡಳಿತರೂಢ ಬಿಜೆಪಿ ಮೈತ್ರಿಕೂಟದೊಂದಿಗೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ವಿಧಾನಸಭಾ ಸ್ಪೀಕರ್ಗೆ ಮನವಿ ಸಲ್ಲಿಸಿದ್ದರು.
ಸ್ಪೀಕರ್ ಅನುಮತಿ ನೀಡಿದ ಬಳಿಕ ಶಾಸಕರಾದ ನವೀನ್ ಜೈಸ್ವಾಲ್ ,ಅರುಣ್ ಕುಮಾರ್ ಬೌರಿ, ಗಣೇಶ್ ಗಂಜು ,ಅಲೋಕ್ ಕುಮಾರ್ ಚೌರಾಸಿಯಾ ,ರಂಜಿತ್ ಸಿಂಗ್ ಮತ್ತು ಜಾನಕಿ ಯಾದವ್ ಅವರು ಜಾರ್ಖಂಡ್ ಭವನದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದ್ದಾರೆ.
2014 ಡಿಸೆಂಬರ್ 28 ರಂದು ಬಿಜೆಪಿ ಮತ್ತು ಎಜೆಎಸ್ಯು ಮೈತ್ರಿಕೂಟ 42 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. 6 ಜೆವಿಎಂ ಶಾಸಕರ ಸೇರ್ಪಡೆಯೊಂದಿಗೆ 81 ಸದಸ್ಯರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸಂಖ್ಯಾಬಲ 48 ಕ್ಕೆ ಏರಿದೆ.
ಬಿಜೆಪಿ ತೊರೆದಿದ್ದ ಬಾಬುಲಾಲ್ ಮುರಾಂಡಿ ಅವರ ನೇತ್ರತ್ವದ ಜೆವಿಎಂನಲ್ಲಿ ಇದೀಗ ಇಬ್ಬರು ಶಾಸಕರು ಮಾತ್ರ ಉಳಿದಿದ್ದಾರೆ.
ಮುಖ್ಯಮಂತ್ರಿ ರಘುಬರ್ ದಾಸ್ ಅವರ ಸರ್ಕಾರ ಇದೀಗ 43 ಶಾಸಕರೊಂದಿಗೆ ಸ್ಫಷ್ಟ ಬಹುಮತ ಹೊಂದಿದಂತಾಗಿದೆ.