ರಾಂಚಿ : ಸೋಮವಾರ ಬೆಳಗಿನ ಜಾವ+- ಜಾರ್ಖಂಡ್ ನ ಡಿಯೋಘರ್ ಪಟ್ಟಣದ ಬೈದ್ಯನಾಥ್ ಧಾಮ್ ದೇವಾಲಯದಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು ಸುಮಾರು 50 ಜನರಿಗೆ ಗಾಯಗಳಾಗಿವೆ.
ಯಾತ್ರಾರ್ಥಿಗಳು ದೇವಸ್ಥಾನದ ಹೊರಗೆ ಬಾಗಿಲು ತೆರೆಯಲು ಕಾಯುತ್ತಿದ್ದರು. ಯಾತ್ರಾರ್ಥಿಗಳಿಗೆ ದರ್ಶನಕ್ಕಾಗಿ ಬೆಳಗ್ಗೆ 4:30 ಕ್ಕೆ ಬಾಗಿಲು ತೆಗೆಯುತ್ತಾರೆ. ಸೋಮವಾರ ಬಾಗಿಲು ತೆಗೆದ ತಕ್ಷಣ ಎಲ್ಲಾ ಯತ್ರಾರ್ಥಿಗಳು ಒಮ್ಮೇಲೆ ಒಳಗೆ ಹೋಗಲು ನುಗ್ಗಿದ್ದರಿಂದ ಕಾಲ್ತುಳಿತ ಉಂಟಾಗಿದೆ.
ಪೋಲಿಸರು ಒಂಬತ್ತು ಪುರುಷರು ಮತ್ತು ಒಬ್ಬ ಮಹಿಳೆ ಸೇರಿ 10 ಜನರ ಸಾವು ಮತ್ತು ಸುಮಾರು 50 ಜನರಿಗೆ ಗಾಯಗಳಾಗಿರುವುದನ್ನು ಧೃಡಪಡಿಸಿದ್ದಾರೆ. ಆದರೆ ಸ್ಥಳೀಯ ಅಧಿಕಾರಿಗಳು 11 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ.
ಯಾತ್ರಾರ್ಥಿಗಳು 3 ಕಿ, ಮೀ ದೂರದಿಂದ ರಾತ್ರೆ ಎಲ್ಲಾ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಸುಮಾರು 5000ಕ್ಕೂ ಹೆಚ್ಚು ಭಕ್ತರಿದ್ದರು. ರಾತ್ರೆ ಎಲ್ಲಾ ಕಾದಿದ್ದರಿಂದ ಬೆಳಗ್ಗೆ ಬೇಗ ಹೋಗಬೇಕೆಂದು ಅಶಿಸ್ತಿನಿಂದ ನಡೆದುಕೊಂಡ ಪರಿಣಾಮ ಕಾಲ್ತುಳಿತಕ್ಕೆ ಸಿಲುಕಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.