ನವದೆಹಲಿ : ಪ್ರಸಕ್ತ ವರ್ಷದಲ್ಲಿ ಭಾರತ-ಪಾಕಿಸ್ಥಾನ ಗಡಿಯಲ್ಲಿ 152 ಬಾರಿ ಕದನ ವಿರಾಮ ಉಲ್ಲಂಘನೆ ಪ್ರಕರಣ ನಡೆದಿದ್ದು ಈ ದಾಳಿಗಳಲ್ಲಿ 15 ಮಂದಿ ಬಲಿಯಾದರೆ 115 ಮಂದಿ ಗಾಯಗೊಂಡಿರುವುದಾಗಿ ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಇತ್ತೀಚೆಗೆ ಭಾರತ ಮತ್ತು ಪಾಕಿಸ್ಥಾನ ನಡುವಣ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನ ಕಡೆಯಿಂದ ಸತತವಾಗಿ ಗುಂಡಿನ ದಾಳಿಗಳು ನಡೆದಿದ್ದು ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಕಾರಣವಾಗಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಪಾಕಿಸ್ಥಾನದಿಂದ ಅವ್ಯಾಹತವಾಗಿ ಕದನವಿರಾಮ ಉಲ್ಲಂಘನೆಯಾಗಿದೆ ಎಂದು ಗೃಹ ಖಾತೆಯ ಸಹಾಯಕ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ
ರಾಜ್ಯ ಸರ್ಕಾರ ನೀಡಿರುವ ವರದಿಯ ಪ್ರಕಾರ ಈ ವರ್ಷದ ಅ.31ರವರೆಗೆ ಗಡಿಯಲ್ಲಿ 152 ಬಾರಿ ಕದನ ವಿರಾಮವನ್ನು ಉಲ್ಲಂ ಸಲಾಗಿದೆ. ಇದರಲ್ಲಿ 13 ಮಂದಿ ನಾಗರಿಕರು ಮತ್ತು ಈರ್ವರು ಭದ್ರತಾ ಸಿಬಂದಿಗಳು ಬಲಿಯಾದರೆ 101ಮಂದಿ ನಾಗರಿಕರು ಮತ್ತು 14ಮಂದಿ ಭದ್ರತಾ ಸಿಬಂದಿಗಳು ಗಾಯಗೊಂಡಿದ್ದಾರೆ.
ಕಥುವಾ, ಸಾಂಬಾ ಮತ್ತು ಜಮ್ಮು ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಪಾಕಿಸ್ಥಾನಿ ಪಡೆಗಳು ನಡೆಸಿದ ಗುಂಡು ಮತ್ತು ಶೆಲ್ ದಾಳಿಗಳಲ್ಲಿ ಗರಿಷ್ಠ ಪ್ರಮಾಣದ ಹಾನಿಗಳು ಸಂಭವಿಸಿವೆ. ಈ ಪ್ರದೇಶಗಳಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ ಸರ್ಕಾರಿ ಕಟ್ಟಡಗಳಲ್ಲಿ ವಸತಿ ವ್ಯವಸ್ಥೆಯನ್ನು ಮಾಡಿ ರೇಶನ್ನ್ನು ಒದಗಿಸಲಾಗಿತ್ತು ಎಂದು ವಿವರಿಸಿದರು.