ಬ್ರಿಸ್ಬೇನ್ : ಕಪ್ಪುಹಣವನ್ನು ಕಪ್ಪುಹಣ ನಿಗ್ರಹಿಸಬೇಕಾದರೆ ಜಾಗತಿಕ ಸಹಕಾರದ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಎರಡನೇ ದಿನವಾದ ನ.16ರಂದು ಪ್ರಧಾನಿ ಮೋದಿ ಕಪ್ಪು ಹಣ ವಾಪಸ್ಸಾತಿ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾರತ ವಿದೇಶಿ ಬ್ಯಾಂಕ್ಗಳಲ್ಲಿರುವ ಕಪ್ಪುಹಣವನ್ನು ವಾಪಸ್ ತರುವ ಉದ್ದೇಶ ಇಟ್ಟುಕೊಂಡಿದೆ. ಆದರೆ ಇದಕ್ಕೆ ಜಾಗತಿಕ ಸಹಾಕಾರದ ಅವಶ್ಯಕತೆ ಇದೆ ಎಂದರು.
ತೆರಿಗೆ ತಪ್ಪಿಸಿ ಇಡಲಾದ ಹಣ ಕೂಡ ಭದ್ರತೆಗೆ ಸವಾಲಿದ್ದಂತೆ. ಈ ಹಿನ್ನಲೆಯಲ್ಲಿ ಭಾರತೀಯರು ಹೊಂದಿರುವ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ನೀಡಿ, ಕಪ್ಪು ಹಣ ಹೊಂದಿರುವವರನ್ನು ಪತ್ತೆ ಹಚ್ಚಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.