ಬೆಂಗಳೂರು : ಜೆಡಿಎಸ್ ನಾಯಕರ ಆಂತರಿಕ ಭಿನ್ನಮತ, ಅಸಮಾಧಾನಗಳು ಮತ್ತೊಂಮ್ಮೆ ಬಹಿರಂಗವಾಗಿದೆ. ಜೆಡಿಎಸ್ ಬಿಟ್ಟು ನಾನೆಲ್ಲೂ ಹೋಗಲ್ಲ, ಆದರೆ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲ್ಲ ಎಂದು ಶಾಸಕ ಜಮೀರ್ ಅಹಮದ್ ಹೇಳಿಕೆ ನೀಡಿದ್ದರೆ, ಇನ್ನೊಬ್ಬ ಶಾಸಕ ಬಸವರಾಜ್ ಹೊರಟ್ಟಿ ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಜಮೀರ್ ಅಹಮದ್ ಜೆಡಿಎಸ್ ಬಿಟ್ಟು ನಾನು ಎಲ್ಲೂ ಹೋಗಲ್ಲ ಎಂದು ಪುನರುಚ್ಛರಿಸಿದ್ದಾರೆ. ಆದರೆ ಪಕ್ಷದಲ್ಲಿ ಯಾವ ಹುದ್ದೆ ನೀಡಿದರೂ ನಾನು ಅದನ್ನು ಸ್ವೀಕರಿಸಲ್ಲ, ನನ್ನ ಕ್ಷೇತ್ರ ಮತ್ತು ಕ್ಷೇತ್ರದ ಜನರ ಸೇವೆಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನುಮುಂದೆ ಜೆಡಿಎಸ್ ನ ಯಾವುದೇ ಕಾರ್ಯಕ್ರಮಗಲಲ್ಲಿ ನಾನು ಭಾಗವಹಿಸಲ್ಲ. ಜೆಡಿಎಸ್ ನನ್ನ ಪಕ್ಷವಾಗಿದೆ, ಜೆಡಿಎಸ್ ಪಕ್ಷನ್ನು ಹೆಚ್.ಡಿ.ಕುಮಾರಸ್ವಾಮಿ ಕಟ್ಟಿದ್ದಲ್ಲ, ಜೆಡಿಎಸ್ ನ್ನು ದೇವೇಗೌಡರು ಹಾಗೂ ಕಾರ್ಯಕರ್ತರ ಮೇಲೆ ನಿಂತಿರುವ ಪಕ್ಷವಾಗಿದೆ ಎಂದು ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗ್ದಾಳಿ್ ನಡೆಸಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಉತ್ತರ ಕರ್ನಾಟ ಜೆಡಿಎಸ್ ನಾಯಕರ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದು, ಚುನಾವಣೆಗಳಲ್ಲಿ ಟಿಕೆಟ್ ಹಂಚಿಕೆ ವೇಳೆ ನನ್ನ ಮಾತಿಗೆ ಬೆಲೆಕೊಟ್ಟಿಲ್ಲ. ಒಂದೇ ಒಂದು ಬಿ ಫಾರಂ ಕೂಡ ನನ್ನ ಕೈಗೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಪಕ್ಷದಲ್ಲಿ ನನ್ನ ಮಾತನ್ನು ಯಾರೂ ಕೇಳಲ್ಲ. ಹಾಗಂತ ನಾನು ಬಿಜೆಪಿ ಪಕ್ಷವನ್ನಾಗಲೀ, ಕಾಂಗ್ರೆಸ್ ನ್ನಾಗಲೀ ಸೇರುವುದಿಲ್ಲ. ಕಾರ್ಯಕರ್ತರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.