ಬೆಂಗಳೂರು : ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಶಾಸಕ ಐವಾನ್ ಡಿಸೋಜಾ ತಿರುಗೇಟು ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿಯಿಂದ ಡಿಸೋಜಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತಿಳಿಸಿದ್ದಾರೆ.
ಐವಾನ್ ಡಿಸೋಜಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಡಿಸೋಜಾಗೆ ಕೆಪಿಸಿಸಿಯಿಂದ ನೊಟಿಸ್ ಜಾರಿ ಮಾಡಲಾ್ಗುವುದು ಎಂದು ತಿಳಿಸಿದರು.
ಡಿಸೋಜಾ ಹೇಳಿಕೆ ಅಕ್ಷಮ್ಯ ಅಪರಾಧ. ಈ ರೀತಿ ವೈಕ್ತಿಕ ಹೇಳಿಕೆಗಳನ್ನು ಯಾರೂ ಕೂಡ ನೀಡಬಾರದು. ಐವಾನ್ ಡಿಸೋಜಾ ಹೇಳಿಕೆಗೆ ನಾನು ಈಶ್ವರಪ್ಪ ಬಳಿ ಕ್ಷಮೆಯಾಚಿಸುತ್ತೆನೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಅಲ್ಲದೇ ಕಾಂಗ್ರೆಸ್ ನಾಯಕರು ಸಂಯಮ ಮೀರಿ ಮಾತನಾಡಬಾರದು ಎಂದು ಪರಮೇಶ್ವರ್ ಕಾಂಗ್ರೆಸ್ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಈ ನಡಿವೆ ಕಾಂಗ್ರೆಸ್ ನಾಯಕರು ತಮ್ಮ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದರಿಂದ ಐವಾನ್ ಡಿಸೋಜಾ ತಮ್ಮ ಹೇಳಿಕೆ ವಾಪಸ್ ಪಡೆದಿದ್ದು, ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದ ಈಶ್ವರಪ್ಪ , ಮುಖ್ಯಮಂತ್ರಿ, ಕೆ.ಜೆ.ಜಾರ್ಜ್ ಮಗಳ ಮೇಲೆ ರೇಪ್ ನಡೆದರೆ ಮಾತ್ರ ಎಚ್ಚೆತ್ತುಕೊಳ್ಳುತಾರೆಯೇ ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಗೆ ತುರುಗೇಟು ನೀಡಿದ್ದ ಕಾಂಗ್ರೆಸ್ ನಾಯಕ ಐವಾನ್ ಡಿಸೋಜಾ, ಈಶ್ವರಪ್ಪ ಹೆಂಡತಿ ಮೇಲೆ ರೇಪ್ ಮಾಡಿದ್ರೆ ಏನಾಗುತ್ತೆ ಎಂದು ನಾನು ಹೇಳಿದ್ರೆ ಏನಾಗುತ್ತೆ ಎನ್ನುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು.