ನವದೆಹಲಿ : ಪಾಕಿಸ್ತಾನದ ತಾಲೀಬಾನ್ ಸಂಘಟನೆಯಿಂದ ಪ್ರತ್ಯೇಕಗೊಂಡಿರುವ ಜಮತ್ ಉಲ್ ಅಹ್ರಾರ್ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ವಾಘಾ ಗಡಿ ಭಾಗದಲ್ಲಿ ನಡೆದ ಸ್ಫೋಟದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಟ್ವಿಟರ್ ನಲ್ಲಿ ಬೆದರಿಕೆ ಹಾಕಿರುವ ತಾಲೀಬಾನ್ ಮತ್ತೊಂದು ಭಾಗವಾಗಿರುವ ಜಮಾತ್ ಉಲ್ ಅಹ್ರಾರ್ ಸಂಸ್ಥೆ ಮುಖ್ಯಸ್ಥ, ನೂರಾರು ಮುಸ್ಲಿಮರ ಕೊಲೆ ಮಾಡಿರುವ ಮೋದಿ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದಾನೆ. ಅಲ್ಲದೇ, ಕಾಶ್ಮೀರ ಮತ್ತು ಗುಜರಾತ್ ನಲ್ಲಿರುವ ಅಮಾಯಕ ಮುಸ್ಲಿಮರ ಸೇಡನ್ನು ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.(“You are the killer of hundreds of Muslims. We will take the revenge of innocent people of Kashmir and Gujarat.”)
ವಾಘಾ ಗಡಿ ಭಾಗದಲ್ಲಿ ಸ್ಫೋಟ ನಡೆದ ಬೆನ್ನಲ್ಲೇ ಭಾರತಕ್ಕೂ ಅಪಾಯವಿದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಮಾತ್-ಉಲ್-ಅಹ್ರಾರ್ ಸಂಘಟನೆ ಬಹಿರಂಗವಾಗಿಯೇ ಬೆದರಿಕೆ ಹಾಕಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ವಾಘಾ ಗಡಿಯಲ್ಲಿ ಆತ್ಮಾಹುತಿ ದಾಳಿ ನಡೆದರೂ ಉಗ್ರರ ನಿಜವಾದ ಗುರಿ ಭಾರತ ಆಗಿತ್ತು ಎಂದು ಕೆಲವೊಂದು ಮೂಲಗಳು ಹೇಳಿವೆ.