ನವದೆಹಲಿ : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಪ್ರತೀಕಾರಕ್ಕಾಗಿ ನಡೆದ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಗೆ ಲಾಸ್ ಏಂಜಲೀಸ್ ಫೆಡರಲ್ ಕೋರ್ಟ್ ಸಮನ್ಸ್ ಜಾರಿಮಾಡಿದೆ.
1984ರಲ್ಲಿ ನಡೆದ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತಾಬ್ ಬಚ್ಚನ್ ಅವರು ರಕ್ತಕ್ಕೆ ರಕ್ತ (ಬ್ಲಡ್ ಫಾರ್ ಬ್ಲಡ್) ಎಂಬ ಘೋಷಣೆ ಕೂಗಿದ್ದರು. ಈ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿದ್ದು, ಉತ್ತರಿಸಲು 21 ದಿನಗಳ ಗಡುವು ನೀಡಲಾಗಿದೆ.
ಅಮೆರಿಕ ಮೂಲದ ಮಾನವ ಹಕ್ಕು ಸಮೂಹವಾದ 'ಸಿಖ್ ಫಾರ್ ಜಸ್ಟೀಸ್' ಸಂಘದ ಸದಸ್ಯರಾದ ಗುರುಪಟ್ವಾಂಟ್ ಪನ್ನೂನ್ ಎಂಬುವವರು ಅಮಿತಾಬ್ ಬಚ್ಚನ್ ವಿರುದ್ಧ ದೂರು ದಾಖಸಿದ್ದರು.
ಬ್ಲಡ್ ಫಾರ್ ಬ್ಲಡ್ ಎಂದು ಘೋಷಣೆ ಕೂಗುವುದರ ಮೂಲಕ ಸಿಖ್ ಸಮುದಾಯದ ವಿರುದ್ಧ ಧಂಗೆ ಏಳುವಂತೆ ಅಮಿತಾಬ್ ಬಚ್ಚನ್ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.