ಚೆನ್ನೈ : ಮಹರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ದಕ್ಷಿಣ ಭಾರತದಲ್ಲು ತನ್ನ ನೆಲೆ ವಿಸ್ತರಿಸಲು ನಿರ್ಧರಿಸಿರುವ ಬಿಜೆಪಿ ತಮಿಳುನಾಡಿನ ಮೇಲೆ ದೃಷ್ಟಿ ನೆಟ್ಟಿದೆ.
ತಮಿಳುನಾಡಿನಲ್ಲಿ ಪ್ರಮುಖ ರಾಜಕೀಯ ಪಕ್ಷ ಡಿಎಂಕೆ ತನ್ನ ಅಸ್ತಿತ್ವವನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಿದ್ದು, ತಮಿಳುನಾಡಿನ ಬಿಜೆಪಿ ಉಸ್ತುವಾರಿ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮುರಳೀಧರ್ ರಾವ್ ತಮ್ಮ ನೆಲೆಯನ್ನು ವಿಸ್ತರಿಸಲು ಮುಂದಾಗಿದ್ದಾರೆ.
ದಕ್ಷಿಣದಲ್ಲಿ ಬಿಜೆಪಿ ನೆಲೆ ವಿಸ್ತರಿಸಿಕೊಳ್ಳಲು ತಮಿಳುನಾಡು ನಮ್ಮ ಕೇಂದ್ರ ಸ್ಥಾನ. ಆಧುನಿಕ ಆನುವಂಶಿಕ ವಿಜ್ನಾನ ನಿರೂಪಿಸುವಂತೆ ಈ ಭಾಗದ ಜನ ದೇಶದ ಇತರ ಭಾಗದ ಜನಕ್ಕಿಂತ ಭಿನ್ನವಾಗಿಲ್ಲ, ಆದುದರಿಂದ ದ್ರಾವಿಡ ಪಕ್ಷಗಳ ಸೈದ್ಧಾಂತಿಕ ನಿಲುವೇ ಛಿದ್ರವಾಗುತ್ತದೆ ಎಂದು ಮುರಳೀಧರ್ ಅಭಿಪ್ರಾಯಪಟ್ಟಿದ್ದಾರೆ.
ದ್ರಾವಿಡ ಪಕ್ಷಗಳು ದಶಕಗಳ ವರೆಗೆ ಆಳಿದ್ದರೂ ಬಿಜೆಪಿಗೆ ಯಾವುದೇ ರೀತಿಯ ಸಹಕಾರವಾಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಒಂದೇ ಪಕ್ಷ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿಗೆ ಮೂರನೆ ಸ್ಥಾನದಲ್ಲಿ ಪೈಪೋಟಿ ನೀಡುವ ಸಾಧ್ಯತೆಯಿದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು.