ಗುವಾಹಟಿ : ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ ಕಾರಣಕ್ಕೆ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿರುವ ಬೆನ್ನಲ್ಲೇ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಕೂಡ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಸಂಸದರ ಆದರ್ಶ ಗ್ರಾಮ ಯೋಜನೆ ಪ್ರಶಂಸಾರ್ಹ. ಒಳ್ಳೆಯ ದಿನಗಳು ಹಾಗೂ ಸ್ವಚ್ಛ ಭಾರತವನ್ನು ನಾವು ಬಯಸುವುದಾದರೆ ಯೋಜನೆಯನ್ನು ಮತ್ತಷ್ಟು ಕ್ಷಿಪ್ರವಾಗಿ ಜರಿಗೆ ತರಬೇಕು ಎಂದು ಗೊಗೊಯ್ ತಿಳಿಸಿದ್ದಾರೆ.
ನರೇಂದ್ರ ಮೋದಿಯವರ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ ಕಾರಣಕ್ಕೆ ಶಶಿ ತರೂರ್ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಕಾಂಗ್ರೆಸ್ ಪಕ್ಷ ವಕ್ತಾರ ಸ್ಥಾನದಿಂದ ತರೂರ್ ಅವರನ್ನು ವಜಾ ಮಾಡಿತ್ತು.
ಈಗ ಅಸ್ಸಾಂ ಸಿಎಂ ತರುಣ್ ಗೊಗೋಯ್ ಅವರು ಕೂಡ ಮೋದಿಯವರನು ಶ್ಲಾಘಿಸಿದ್ದು, ಗೊಗೊಯ್ ವಿರುದ್ಧವೂ ಕಾಂಗ್ರೆಸ್ ಕ್ರಮ ಜರುಗಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.