ಮುಂಬೈ : ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂಬ ವಿರೋಧಿಗಳ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ತಾವು ದೆಹಲಿಯಲ್ಲಿರುವವರೆಗೂ ಮಹಾರಾಷ್ಟ್ರವನ್ನು ವಿಭಜಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅ.7ರಂದು ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಪ್ರಧಾನಿ ಮೋದಿ, ತಾವು ದೆಹಲಿಯಲ್ಲಿರುವವರೆಗೂ ಮಹಾರಾಷ್ಟ್ರವನ್ನು ವಿಭಜಿಸಲು ಸಾಧ್ಯವಿಲ್ಲ. ಮುಂಬೈ ನ್ನು ಬಿಟ್ಟು ಮಹಾರಾಷ್ಟ್ರವಿಲ್ಲ. ಮಹಾರಾಷ್ಟ್ರವಿಲ್ಲದೇ ಭಾರತ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮುಂಬೈನ್ನು ಮಹಾರಾಷ್ಟ್ರದಿಂದ ವಿಭಜಿಸಲಾಗುತ್ತದೆ ಎಂದು ವದಂತಿ ಹಬ್ಬಿಸಲಾಗುತ್ತಿದೆ. ಮಹಾರಾಷ್ಟ್ರವನ್ನು ವಿಭಜಿಸಲು ಸಾಧ್ಯವೇ? ಛತ್ರಪತಿ ಶಿವಾಜಿಯ ಮಹಾರಾಷ್ಟ್ರವನ್ನು ವಿಭಜಿಸುವವರು ಇದ್ದಾರೆಯೇ ಎಂದು ಮೋದಿ ಪ್ರಶ್ನಿಸಿದ್ದಾರೆ. ಮುಂಬೈ ನ್ನು ಬಿಟ್ಟು ಮಹಾರಾಷ್ಟ್ರವಿರಲು ಸಾಧ್ಯವಿಲ್ಲ ಮಹಾರಾಷ್ಟ್ರವನ್ನು ಬಿಟ್ಟು ಭಾರತ ಇರಲು ಸಾಧ್ಯವಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. ನಾನು ಅಧಿಕಾರದಲ್ಲಿರುವವರೆಗೂ ಮಹಾರಾಷ್ಟ್ರವನ್ನು ವಿಭಜನೆ ಮಾಡಲು ಬಿಡುವುದಿಲ್ಲ ಎಂದು ಮೋದಿ 'ಮಹಾ'ಜನತೆಗೆ ಭರವಸೆ ನೀಡಿದ್ದಾರೆ.
ಇದೇ ವೇಳೆ ಒಂದೇ ವರ್ಷದಲ್ಲಿ 3700 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಜನತೆಗೆ ನೆನಪಿಸಿದ ನರೇಂದ್ರ ಮೋದಿ, ಮಹಾರಾಷ್ಟ್ರ ರಾಜ್ಯಕ್ಕೆ ಅ.15ರಂದು ಸ್ವಾತಂತ್ರ್ಯ ದೊರೆಯಲಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕೃಷಿ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅ.7ರಂದು ಮಹಾರಾಷ್ಟ್ರದಲ್ಲಿ ಪ್ರಧಾನಿ 5 ಸಾರ್ವಜನಿಕ ರ್ಯಾಲಿಗಳು ನಿಗದಿಯಾಗಿವೆ.