ಬಾಗಲಕೋಟೆ : ಶ್ರೀರಾಮಸೇನೆ ಕಾನೂನು ಬದ್ಧ ಸಂಘಟನೆ, ನಿಷೇಧ ಮಾಡಿದರೆ ರಕ್ತಪಾತ ನಡೆಯುತ್ತದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಶ್ರೀರಾಮಸೇನೆ ನಿಷೇಧ ಮಾಡಿದರೆ ರಕ್ತಪಾತ ನಡೆಯುತ್ತದೆ. ಇದಕ್ಕೆ ನಾನು ಹೊಣೆಯಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೊಣೆಯೆಂದು ಗುಡುಗಿದರು.
ನಾನು ಎಂದಿಗೂ ಭಾಷೆ, ಗಡಿಗಾಗಿ ಹೋರಾಟ ಮಾಡಿಲ್ಲ ಮಾಡುವುದೂ ಇಲ್ಲ, ಹಿಂದೂಪರ ಹೋರಾಟಕ್ಕಾಗಿಯಷ್ಟೇ ನನ್ನ ಆದ್ಯತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಘಪರಿವಾರದ ಬಗ್ಗೆ ಟೀಕೆ ಮಾಡಿರುವುದು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮಸೇನೆ ಶಿವಸೇನೆಗೆ ಬೆಂಬಲ ನೀಡಲಿದೆ ಎಂದಿರುವ ಮುತಾಲಿಕ್ ಬಿಜೆಪಿಗೆ ಹಿಂದೂತ್ವದ ಬಗ್ಗೆ ಕಾಳಜಿ ಇಲ್ಲ, ಅಧಿಕಾರಕ್ಕಾಗಿ ನಾಟಕವಾಡುತ್ತಿದೆ ಎಂದು ತಿಳಿಸಿದ್ದಾರೆ.