ಬೆಂಗಳೂರು : ನವೆಂಬರ್ ತಿಂಗಳಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಸೂಕ್ತ ದಿನಾಂಕ ನಿಗದಿಪಡಿಸುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ ಪ್ರತಿವರ್ಷ 60 ದಿನ ವಿಧಾನಮಂಡಲ ಅಧಿವೇಶನ ನಡೆಸಬೇಕು ಎಂಬ ನಿಯಮವಿದೆ. ಈ ಹಿಂದೆಲ್ಲಾ ಅದು ಕಾರ್ಯರೂಪಕ್ಕೆ ಬಂದಿಲ್ಲ. ಎಂದರು.
ಈ ಬಾರಿಯಾದರೂ 60ದಿನ ಅಧಿವೇಶನ ನಡೆಸಬೇಕು ಎಂಬ ಉದ್ದೇಶದಿಂದ ಬೆಳಗಾವಿಯಲ್ಲಿ ಕನಿಷ್ಠ 17 ದಿನ ಅಥವಾ ಅದಕ್ಕಿಂತ ಹೆಚ್ಚು ದಿನ ಅಧಿವೇಶನ ನಡೆಸುವಂತೆ ಪತ್ರದಲ್ಲಿ ಸಲಹೆ ನೀಡಿರ್ತುವುದಾಗಿ ತಿಳಿಸಿದರು.
ಪ್ರತಿವರ್ಷ ಇದುವರೆಗೆ ಬೆಂಗಳೂರಿನಲ್ಲಿ 43 ದಿನ ಅಧಿವೇಶನ ನಡೆದಿದೆ. 60ರ ಗಡಿತಲುಪಲು ಇನ್ನೂ 17 ದಿನ ಬೇಕು. ಹೀಗಾಗಿ ಬೆಳಗಾವಿ ಸುವರ್ಣ ವಿಧಾನಸೌಧದ ಅಧಿವೇಶನವನ್ನು ಹೆಚ್ಚುದಿನ ನಡೆಸಬೇಕು ಎಂದು ತಿಳಿಸಿರುವುದಾಗಿ ಹೇಳಿದರು.