ನವದೆಹಲಿ : ತೀವ್ರ ವಿವಾದಕ್ಕೆ ಕಾರಣವಾಗಿದ್ದ ಸೇತುಸಮುದ್ರಂ ಯೋಜನೆಗಾಗಿ ರಾಮಸೇತುವನ್ನು ನಾಶಮಾಡುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಸೇತುವನ್ನು ನಾಶಮಾಡುವುದರಿಂದ ಶ್ರೀಲಂಕಾಗೆ ಪ್ರಯಾಣ ಮಾಡಲು ಸುಲಭವಾಗುವುದು ನಿಜ. ಶ್ರೀಲಂಕಾಗೆ ಹತ್ತಿರದ ಜಲಮಾರ್ಗವನ್ನು ನಿರ್ಮಿಸುವ ಯೋಜನೆಗಾಗಿ ಅಸಂಖ್ಯಾತ ಭಾರತೀಯರ ಪೂಜ್ಯ ಭಾವನೆಯಿಂದ ಆರಾಧಿಸುವ ರಾಮಸೇತು ನಾಶಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದುಗಳಿಗೆ ಧಾರ್ಮಿಕ ಮತ್ತು ಭಾವನಾತ್ಮಕವಾಗಿ ಮುಖ್ಯವಾಗಿರುವ ರಾಮಸೇತುವನ್ನು ಉಳಿಸಿಕೊಂಡು ಶ್ರೀಲಂಕಾಗೆ ಪರ್ಯಾಯ ಜಲಮಾರ್ಗವನ್ನು ಕಂಡುಕೊಳ್ಳುವ ಸಮೀಕ್ಷೆ ನಡೆಸಲು ನೀಲನಕ್ಷೆ ರೂಪಿಸುವಂತೆ ಕೇಂದ್ರ ಸರ್ಕಾರ ರೈಟ್ಸ್ ಎಂಬ ಸಂಸ್ಥೆಗೆ ಸೂಚಿಸಿದೆ ಎಂದರು.