ನವದೆಹಲಿ : ದೆಹಲಿಯಲ್ಲಿ ತಮಗೆ ಸಿಎಂ ಆಗಲು ಬಿಜೆಪಿ ಆಫರ್ ನೀಡಿದೆ ಎಂಬ ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್, ಈಗ ಅರವಿದ್ ಕೇಜ್ರಿವಾಲ್ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು. ಮೋದಿಯವರ ಜಪಾನ್ ಭೇಟಿ, ಕಾಶ್ಮೀರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದ ಕ್ರಮವನ್ನು ಪ್ರಶಂಸಿಸಿದರು.
ಇದೇ ವೇಳೆ ದೆಹಲಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನಗೈದ ಕೇಜ್ರಿವಾಲ್ ವರ್ತನೆಯನ್ನು ಟೀಕಿಸಿದರು.
ಸೆ.17ರಂದು ಪ್ರಧಾನಿ ಮೋದಿ ಜನ್ಮದಿನ ಕಾರ್ಯಕ್ರಮ ಹಾಸ್ಯಸಂಜೆಯಲ್ಲಿ ಭಾಗವಹಿಸುವೆ, ಭಾಗವಹಿಸದಂತೆ ಆಮ್ ಆದ್ಮಿಪಕ್ಷ ಹೇಳಿದರೆ ಪಕ್ಷ ಬಿಡುತ್ತೇನೆ ಎಂದಿರುವ ಕುಮಾರ್ ವಿಶ್ವಾಸ್, ಬಿಜೆಪಿ ಸೇರುವ ಇರಾದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.