ನವದೆಹಲಿ : 'ಗುಜರಾತ್ ಗಲಭೆ'ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸಬಾರದು ಎಂದು ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ ಹೇಳಿದ್ದಾರೆ.
ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ಕೊನೆಯಿಲ್ಲದ ವಿಚಾರಣೆ ಎದುರಿಸಿದ್ದಾರೆ. ಗಲಭೆ ಸಂಬಂಧ ನಡೆದಿರುವ ವಿಚಾರಣೆಯಲ್ಲಿ ಮೋದಿ ನಿರಪರಾಧಿಯೆಂದು ಘೋಷಿಸಿದ್ದಾರೆ ಆದ್ದರಿಂದ ಮೋದಿ ಅವರನ್ನು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂಷಿಸಬಾರದು ಎಂದು ಹೇಳಿದ್ದಾರೆ.
ಹೆಡ್ ಲೈನ್ಸ್ ಟುಡೆ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೆ ನೀಡಿರುವ ಟೋನಿ ಅಬೋಟ್, ದೇಶದಲ್ಲಿ ನಡೆದ ಅವಘಡಕ್ಕೆ ಮೋದಿ ಅವರ ವಿರುದ್ಧ ಮಾತನಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.
ಭಾರತವನ್ನು 'ಪ್ರಥಮ ದರ್ಜೆ ಅಂತಾರಾಷ್ಟ್ರೀಯ ನಾಗರಿಕ'ರಾಷ್ಟ್ರವೆಂದು ಹೇಳಿರುವ ಆಸ್ಟ್ರೇಲಿಯಾ ಪ್ರಧಾನಿ, ತಮ್ಮ ಸರ್ಕಾರ ಭಾರತದ ವಿದ್ಯುತ್ ಶಕ್ತಿಯ ಮೂಲವಾಗಲು ಇಚ್ಛಿಸುತ್ತದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆ ತಡೆಗಟ್ಟಲು ಆಸ್ಟ್ರೇಲಿಯಾ-ಭಾರತ ಪರಸ್ಪರ ಉತ್ತಮ ಸಹಕಾರ ಹೊಂದಿದೆ ಭಯೋತ್ಪಾದನಾ ನಿಗ್ರಹಕ್ಕೆ ಮುಂದಿನ ದಿನಗಳಲ್ಲಿ ಭಾರತ-ಆಸ್ಟ್ರೇಲಿಯಾ ರಾಷ್ಟ್ರಗಳ ಸಹಕಾರ ಮತ್ತಷ್ಟು ವೃದ್ಧಿಗೊಳ್ಳಲಿದೆ ಎಂದು ಟೋನಿ ಅಬೋಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.