Untitled Document
Sign Up | Login    
Dynamic website and Portals
  
August 28, 2014

ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್ಸಾದ ವಾಲ್ಮೀಕಿಗಳು

ಉತ್ತರ ಪ್ರದೇಶದಲ್ಲಿ ದೇವಾಲಯವಾಗಿ ಮಾರ್ಪಾಡಾದ ಚರ್ಚ್

ದೇವಾಲಯವಾಗಿ ಮಾರ್ಪಾಡಾದ ಚರ್ಚ್.... ದೇವಾಲಯವಾಗಿ ಮಾರ್ಪಾಡಾದ ಚರ್ಚ್....

ಲಖ್ನೌ : ಇತ್ತೀಚಿನ ದಿನಗಳಲ್ಲಿ ಹಲವು ಪ್ರದೇಶದಲ್ಲಿ ಚರ್ಚ್ ಗಳ ಮುಂದೆ ಗರುಡ ಕಂಬ, 'ಕ್ರಿಸ್ತನ ದೇವಾಲಯ'ಎಂಬ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಆಚರಣೆ, ಬೋರ್ಡ್ ಗಳನ್ನು ನೋಡಿರುತ್ತೀರಿ. ಆದರೆ ಉತ್ತರ ಪ್ರದೇಶದಲ್ಲಿ ಚರ್ಚ್ ದೇವಾಲಯವಾಗಿ ಮಾರ್ಪಾಡಾಗಿದ್ದು 1995ರಲ್ಲಿ ಕ್ರಸ್ತ ಮತಕ್ಕೆ ಮತಾಂತರಗೊಂಡಿದ್ದ ಹಿಂದೂಗಳು ಮಾತೃ ಧರ್ಮಕ್ಕೆ ಮರಳಿದ್ದಾರೆ.

ಉತ್ತರ ಪ್ರದೇಶಆಲಿಗಢದಲ್ಲಿ ಶಿಲುಬೆಯನ್ನು ಹೊತ್ತಿದ್ದ ಚರ್ಚೊಂದು ರಾತ್ರೋರಾತ್ರಿ ಶಿವನ ಫೋಟೋಗಳಿಂದ ಅಲಂಕರಿಸಿಕೊಂಡು ದೇವಸ್ಥಾನವಾಗಿ ಮಾರ್ಪಾಡಾಗಿದೆ. 1995ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ 72 ವಾಲ್ಮೀಕಿ ಜನಾಂಗದವರನ್ನು(ಒಟ್ಟು 8 ವಾಲ್ಮೀಕಿ ಜನಾಂಗದ ಕುಟುಂಬ) ಗಳು ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಈ ಮೂಲಕ ಸೆವೆಂತ್‌ ಡೇ ಅಡ್ವೆಂಟಿಸ್‌ ಗೆ ಸೇರಿದ್ದ ಈ ಚರ್ಚನ್ನು ಶಿವನ ಪೂಜೆ ಮಾಡುವ ಸ್ಥಳವಾಗಿ ಮಾರ್ಪಾಡು ಮಾಡಲಾಗಿದೆ.

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ವಾಲ್ಮೀಕಿ ಜನಾಂಗದವರು ಹಿಂದೂ ಧರ್ಮಕ್ಕೆ ಮರಳಿದ ನಂತರ ಆಲೀಗಢದಿಂದ 30 ಕಿಮೀ ದೂರದಲ್ಲಿರುವ ಅಸೊರೈ ಎಂಬಲ್ಲಿರುವ ಈ ಚರ್ಚ್‌ ಒಳಗೆ ಶುದ್ಧೀಕರಣ ಸಮಾರಂಭ ನಡೆಸಲಾಗಿದೆ. ಬಳಿಕ ಗ್ರಾಮದ ಮಕ್ಕಳು ಆ ದೇಗುಲದ ಆವರಣವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಚರ್ಚ್‌ ಹೆಗ್ಗುರುತಾಗಿದ್ದ ಶಿಲುಬೆಯನ್ನು ಅಲ್ಲಿಂದ ತೆಗೆಯಲಾಗಿದ್ದು, ಅದನ್ನು ಚರ್ಚ್‌ನ ಗೇಟ್ ನಿಂದ ಆಚೆಗೆ ಇರಿಸಲಾಗಿದೆ. ಕಟ್ಟಡದೊಳಗೆ ಶಿವನ ಫೋಟೋಗಳನ್ನು ಗೋಡೆಗೆ ನೇತು ಹಾಕಲಾಗಿದೆ.

ಇದು ಮತಾಂತರವಲ್ಲ, ತವರಿಗೆ ಮರಳಿದ್ದು ಅಷ್ಟೇ. ಅವರ ವಿವೇಚನೆಗೆ ಎಲ್ಲವನ್ನೂ ಬಿಡಲಾಗಿತ್ತು. ಅವರಿಗಿಂದು ತಪ್ಪಿನ ಅರಿವಾಗಿದೆ. ಹೀಗಾಗಿ ಅವರು ತಮ್ಮ ಸ್ವಧರ್ಮಕ್ಕೆ ಮರಳಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ನಾವು ನಮ್ಮ ಸಮಾಜವನ್ನು ಚದುರಿಹೋಗಲು ಬಿಡುವುದಿಲ್ಲ ಎಂದು ಸಂಘದ ಪ್ರಚಾರಕ ಹಾಗೂ ಧರ್ಮ ಜಾಗರಣ್‌ ವಿವಾದ್‌ನ ಪ್ರಮುಖರಾಗಿರುವ ಕೇಮ್‌ ಚಂದ್ರ ತಿಳಿಸಿದ್ದಾರೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ವಾಲ್ಮೀಕಿ ಸಮುದಾಯದ ಎಂಟು ಕುಟುಂಬಗಳನ್ನು ನಾನು ಅನೇಕ ಸಲ ಭೇಟಿಯಾಗಿ ತಮ್ಮ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿದ್ದೆ ಎಂದು ಇದೇ ವೇಳೆ ಕೇಮ್‌ಚಂದ್ರ ಹೇಳಿದ್ದಾರೆ.

ನಾವು ಜಾತಿ ವ್ಯವಸ್ಥೆಯಿಂದ ಬೇಸತ್ತು ಕ್ರೈಸ್ತ ಧರ್ಮಕ್ಕೆ ಹೋಗಿದ್ದೆವು. ಆದರೆ ಕೈಸ್ತರ ನಡುವೆ ಕೂಡ ನಮ್ಮ ಸ್ಥಿತಿಯೇನೂ ಬದಲಾಗಲಿಲ್ಲ. ಹಿಂದುಗಳಾಗಿದ್ದಾಗ ನಮಗೆ ಯಾವುದೇ ಸ್ಥಾನಮಾನಗಳಿರಲಿಲ್ಲ. ಚಿಲ್ಲರೆ ಕೆಲಸಗಳಿಗಷ್ಟೇ ನಾವು ಸೀಮಿತರಾಗಿದ್ದೆವು. ಕ್ರಿಶ್ಚಿಯನ್ನರಾಗಿ 19 ವರ್ಷಗಳಾದ ಮೇಲೂ ನಮಗೆ ಆ ಧರ್ಮದಿಂದ ಯಾರೂ ನೆರವಿಗೆ ಬರಲಿಲ್ಲ. ಕ್ರಿಸ್‌ಮಸ್‌ ಆಚರಣೆ ಕೂಡ ಇರಲಿಲ್ಲ. ಮಿಷನರಿಗಳು ನಮಗಾಗಿ ಚರ್ಚ್‌ ಕಟ್ಟಿಸಿದ್ದು, ಅಲ್ಲಿ ಕೆಲ ಗ್ರಾಮಸ್ಥರು ಮದುವೆಯಾಗಿದ್ದರು, ಅಷ್ಟೇ ಎಂದು ವಾಪಸ್‌ ಹಿಂದು ಧರ್ಮಕ್ಕೆ ಮರಳಿದ ಅನಿಲ್‌ ಗೌರ್‌ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Religion & Spirituality

ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ: ಮಹಿಳೆಯರ ದೇಗುಲ ಪ್ರವೇಶ ಕುರಿತ ಅರ್ಜಿ ಸಾಂವಿಧಾನಿಕ ಪೀಠಕ್ಕೆ
  • ಶಬರಿಮಲೈ ದೇಗುಲಕ್ಕೆ ಮಹಿಳೆಯ ಪ್ರವೇಶ ಕುರಿತಾದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.
  • ವೈಭವದ ದಸರಾ ಮಹೋತ್ಸವ: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ
  • ನಂದಿಧ್ವಜಕ್ಕೆ ಸಿಎಂ ಪೂಜೆ: ಜಂಬೂಸವಾರಿಗೆ ಚಾಲನೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited