ಪೀಟರ್ ಮಾರಿಟ್ಜ್ ಬರ್ಗ್ : ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ‘ಸತ್ಯಾಗ್ರಹದ ಜನ್ಮಸ್ಥಳ’ (ಬರ್ತ್ ಪ್ಲೇಸ್ ಆಫ್ ಸತ್ಯಾಗ್ರಹ) ಪ್ರದರ್ಶನವನ್ನು ಪ್ರಧಾನಿ ಉದ್ಘಾಟಿಸಿದರು.
ಮೋಹನದಾಸ್ ಹೆಸರಿನ ವಕೀಲರನ್ನು 1893ರಲ್ಲಿ ಪ್ರಯಾಣ ಮಾಡುತ್ತಿರುವಾಗ ಹೊರದಬ್ಬಿದ ಸ್ಥಳದಿಂದ ನಾನು ಮಾತನಾಡುತ್ತಿದ್ದೇನೆ. ಈ ಸ್ಥಳ (ಪೀಟರ್ ಮಾರಿಟ್ಜ್ ಬರ್ಗ್) ‘ಮೋಹನದಾಸ್’ ಅವರನ್ನು ‘ಮಹಾತ್ಮ’ರಾಗಿ ಪರಿವರ್ತನೆ ಮಾಡಿದ ಸ್ಥಳ. ಆ ದಿನ ಮೋಹನದಾಸ್ ಅವರ ಪಯಣವು ವಕೀಲನನ್ನು ಕೊನೆಗೊಳಿಸಿತು, ಆದರೆ ‘ಮಹಾತ್ಮ’ನ ನೂತನ ಪಯಣವನ್ನು ಆರಂಭವಾಗುವಂತೆ ಮಾಡಿತು ಎಂದು ಮೋದಿ ಇತಿಹಾಸವನ್ನು ಸ್ಮರಿಸಿದರು.
ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲ ಅವರ ನೆನಪುಗಳು ಭವಿಷ್ಯದ ತಲೆಮಾರುಗಳಿಗೂ ಸ್ಪೂರ್ತಿ ನೀಡುತ್ತಲೇ ಇರುತ್ತವೆ. ದಕ್ಷಿಣ ಆಫ್ರಿಕವು ಸುದೀರ್ಘ ಹೋರಾಟ ನಡೆಸಿತು. ಭಾರತ ಕೂಡಾ ಈ ಹೋರಾಟದ ಭಾಗವಾಗಿತ್ತು. ಇಂದು ದಕ್ಷಿಣ ಆಫ್ರಿಕ ಮತ್ತು ಭಾರತ ಅಭಿವೃದ್ಧಿಗಾಗಿ ಭುಜಕ್ಕೆ ಭುಜ ಕೊಟ್ಟು ಶ್ರಮಿಸುತ್ತಿವೆ ಎಂದು ಪ್ರಧಾನಿ ಹೇಳಿದರು. ದಕ್ಷಿಣ ಆಫ್ರಿಕ ಪಯಣ ನನ್ನ ಪಾಲಿಗೆ ‘ತೀರ್ಥ ಯಾತ್ರೆ’ ಆಯಿತು. ಭಾರತದ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಎಲ್ಲಾ ಮೂರೂ ಸ್ಥಳಗಳನ್ನು ನಾನು ಸಂದರ್ಶಿಸಿದೆ ಎಂದು ಮೋದಿ ನುಡಿದರು.
ಇದಕ್ಕೆ ಮುನ್ನ ಡರ್ಬನ್ ಪೆನೆಟ್ರಿಚ್ ರೈಲು ನಿಲ್ದಾಣದಿಂದ ಪೀಟರ್ ಮಾರಿಟ್ಜ್ ಬರ್ಗ್ ನಿಲ್ದಾಣಕ್ಕೆ ಮೋದಿ ಅವರು ರೈಲಿನಲ್ಲೇ ಪ್ರಯಾಣ ಬೆಳೆಸಿದರು. ಗಾಂಧಿ ಅವರು ಪ್ರಯಾಣಿಸಿದ್ದ ರೈಲು ಮಾರ್ಗದಲ್ಲಿ ಇಂದು ಮೋದಿ ಸಂಚರಿಸಿದರು. ಅಂದು ಗಾಂಧಿಯವರು ಪ್ರಯಾ ಣಿಸಿದ್ದ ರೈಲನ್ನೇ ಹೋಲುವ ರೈಲಿನಲ್ಲಿ ಮೋದಿ ಪ್ರಯಾಣಸಿದ್ದು ವಿಶೇಷವಾಗಿತ್ತು. ಪೆಂಟ್ರಿಕ್ ನಿಲ್ದಾಣದಲ್ಲಿ ರೈಲು ಹತ್ತಿದ ಮೋದಿಯವರು ಅಲ್ಲಿಂದ 15 ಕಿ.ಮೀ. ದೂರದ, ಗಾಂಧಿ ಅವರನ್ನು ರೈಲಿಂದ ಹೊರಗೆಸೆಯಲ್ಪಟ್ಟ ನಿಲ್ದಾಣವಾದ ಪೀಟರ್ಮಾರಿಟ್ಜ್ ಬರ್ಗ್ಕ್ಕೆ ಆಗಮಿಸಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಿದರು. ಇದೇ ವೇಳೆ ಗಾಂಧಿ ಅವರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ ಫೀನಿಕ್ಸ್ ಸೆಟ್ಲ ಮೆಂಟ್ಗೂ ಮೋದಿ ಭೇಟಿ ನೀಡಿದ್ದರು.