ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ವೀರಯೋಧ ಬಾಬಾ ಬಾಂದಾಸಿಂಗ್ರ 300 ನೇ ಸ್ಮರಣಾರ್ಥ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವೀರ ಬಾಬಾರ ಕುರಿತು ರಚಿತ ಪುಸ್ತಕವೊಂದನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಜೂನ್ 21 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಡುಗಡೆ ಮಾಡಿದ್ದ ಬೆಳ್ಳಿ ನಾಣ್ಯಗಳನ್ನು ಮೋದಿ ಹಾಗೂ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ರಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ.
ಸಿಖ್ಖರ ಮಿಲಿಟರಿ ಕಮಾಂಡರ್ ಆಗಿದ್ದ ಬಾಬಾ ಬಾಂದಾಸಿಂಗ್ ಬಹಾದೂರ್ 1710 ರಲ್ಲಿ ಮೊಘಲರ ವಿರುದ್ಧ ಸಮರ ಸಾರಿ ಸಿಖ್ಖರ ಅಸ್ವಿತ್ವಕ್ಕೆ ನಿರಂತರ ಹೋರಾಟ ನಡೆಸಿದ್ದ, 1716 ರಲ್ಲಿ ಮೊಘಲರಿಗೆ ಸಿಕ್ಕಿಬಿದ್ದು ಗಲ್ಲುಶಿಕ್ಷೆಗೆ ಗುರಿಯಾಗಿದ್ದ.