ಕಾರವಾರ : ಮುಳುಗುತ್ತಿದ್ದ ಹಡಗಿನಲ್ಲಿನ ನಾವಿಕರನ್ನು ಭಾರತೀಯ ನೌಕಾದಳ ಸಿಬ್ಬಂದಿಗಳು ಅರಬ್ಬಿ ಸಮುದ್ರದಲ್ಲಿ ರಕ್ಷಿಸಿದ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ ಇನ್ಸಿನಿಟಿ ಹೆಸರಿನ ವಿದೇಶಿ ಹಡಗು ಸಂಚರಿಸುತ್ತಿರುವಾಗ ಹಡಗಿನಲ್ಲಿ ರಂದ್ರ ಕಾಣಿಸಿಕೊಂಡಿದ್ದರಿಂದ ಮುಳುಗುವ ಸ್ಥಿತಿಗೆ ತಲುಪಿತ್ತು.
ಹಡಗಿನಲ್ಲಿ ಒಂದೇ ಸಮನೆ ನೀರು ತುಂಬಿದ ಪರಿಣಾಮ ಪರಿಸ್ಥಿತಿ ಹದಗೆಟ್ಟಿತ್ತು. ಈ ಸಂದರ್ಭದಲ್ಲಿ ಭಾರತೀಯ ನೌಕಾದಳ ಸಿಬ್ಬಂದಿ ನೆರವಿಗೆ ಧಾವಿಸಿ, ವಿದೇಶಿ ನಾವಿಕರನ್ನು ರಕ್ಷಿಸಿದ್ದಾರೆ.
ಈ ಹಡಗು ಕಂಡ್ಲಾ ದೇಶದಿಂದ ಕಾರವಾರಕ್ಕೆ ಆಗಮಿಸುತಿತ್ತು ಎಂದು ತಿಳಿದು ಬಂದಿದೆ.