ಮುಂಬೈ : ಅರಬ್ಬಿ ಸಮುದ್ರದಲ್ಲಿ ಜಿಂದಾಲ್ ಕಾಮಾಕ್ಷಿ ಸರಕು ಸಾಗಣೆ ಹಡಗು ಮುಳುಗಡೆಯಾಗಿದೆ. ಐಎನ್ ಎಸ್ ಮುಂಬೈ ನೌಕೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮುಂಬೈನಿಂದ 40 ನಾಟಿಕಲ್ ಮೈಲಿ ದೂರದಲ್ಲಿ ಜಿಂದಾಲ್ ಕಾಮಾಕ್ಷಿ ಸರಕು ಸಾಗಣೆ ಹಡಗು ಮುಳುಗಡೆಯಾದ ಘಟನೆ ನಡೆದಿದೆ.
ಮುಂಬೈ ನೌಕಾನೆಲೆಗೆ ಜೂ.21ರ ಮಧ್ಯರಾತ್ರಿ ರಾತ್ರಿ ಸರಕು ಸಾಗಣೆ ಹಡಗು ಮುಳುಗಡೆಯಾಗುತ್ತಿರುವ ಬಗ್ಗೆ ಸಂದೇಶ ರವಾನೆಯಾಗಿತ್ತು. ಸಂದೇಶ ಆಧರಿಸಿ ಐಎನ್ ಎಸ್ ಮುಂಬೈ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಸಿಂ ಕಿಂಗ್ ಹೆಲಿ ಕಾಪ್ಟರ್ ಮೂಲಕ ಮಧ್ಯ ರಾತ್ರಿಯಿಂದ ಹಡಗಿನಲ್ಲಿದ್ದ ಸಿಬ್ಬಂದಿಗಳ ರಕ್ಷಣಾಕಾರ್ಯಾಚರಣೆ ನಡೆಸಲಾಗಿದೆ. ಹಡಗಿನಲ್ಲಿದ್ದ 20 ಜನರಲ್ಲಿ 19 ಸಿಬ್ಬಂದಿಗಳನ್ನು ಈವರೆಗೆ ರಕ್ಷಣೆ ಮಾಡಲಾಗಿದ್ದು, ಇನ್ನೋರ್ವ ನ ಬಗ್ಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ನೌಕಾ ನೆಲೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.