Untitled Document
Sign Up | Login    
Dynamic website and Portals
  
April 13, 2016

ಭೂಮಿ ಭೋಗ್ಯ ಕಾನೂನಿನಲ್ಲಿ ಮಹತ್ತರ ಬದಲಾವಣೆಃ ಕೇಂದ್ರ ಸರ್ಕಾರದ ನಿರ್ಧಾರ

ಭೂಮಿ ಭೋಗ್ಯ ಕಾನೂನಿನಲ್ಲಿ ಮಹತ್ತರ ಬದಲಾವಣೆಃ ಕೇಂದ್ರ ಸರ್ಕಾರದ ನಿರ್ಧಾರ

ನವದೆಹಲಿ : ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ, ಕೃಷಿ ಭೂಮಿ ಭೋಗ್ಯ ಕಾಯ್ದೆ 2016ರನ್ನು ಜಾರಿಗೊಳಿಸಿದೆ. ಈ ಮೂಲಕ ಭಾರತದಲ್ಲಿ ಭೂಮಿ ಭೋಗ್ಯ ನೀಡುವುದು ಕಾನೂನು ಬದ್ದವಾದಂತಾಗಿದೆ. ಇದರಿಂದ ವ್ಯವಸಾಯದಲ್ಲಿ ದಕ್ಷತೆ, ಬಡತನ ನಿರ್ಮೂಲನೆ ಸಾಧ್ಯವಾಗಬಹುದೆಂದು ಸರ್ಕಾರದ ನಿರೀಕ್ಷೆ ಇದೆ. ಮಾದರಿ ಅಧಿನಿಯಮವನ್ನು, ಒಮ್ಮೆ ರಾಜ್ಯಗಳು ಅಂಗೀಕರಿಸಿದರೆ, ಈಗ ಅಸ್ತಿತ್ವದಲ್ಲಿರುವ ಕಾಯಿದೆ ಹೊರಟುಹೋಗಿ, ರಾಜ್ಯದ ಪ್ರಕಟಣೆ ದಿನಾಂಕದಿಂದ ಹೊಸ ಕಾಯಿದೆ ಅಸ್ತಿತ್ವಕ್ಕೆ ಬರಲಿದೆ.

ಈ ಕಾಯ್ದೆಯ ಪ್ರಕಾರ, ಭೂಮಿಯ ಒಡೆಯ ಬಾಡಿಗೆದಾರನ ಜೊತೆ ಕಾನೂನು ಬದ್ಧವಾಗಿ, ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಾಗಿ, ಕೆಲವು ಸಮಯದವರೆಗೆ ಪರಸ್ಪರ ಒಪ್ಪಿದ ನಿಯಮಗಗಳಿಗೆ ಭೋಗ್ಯಒಪ್ಪಂದ ಮಾಡಿಕೊಳ್ಲಬಹುದು.

ಭೂಸ್ವಾದೀನ ಕಾಯ್ದೆ 2013ಕ್ಕೆ ತಿದ್ದುಪಡಿ ತರುವ ಸರ್ಕಾರದ ಪ್ರಯತ್ನಕ್ಕೆ ಸಂಸತ್ತಿನಲ್ಲಿ ಹಿನ್ನಡೆ ಉಂಟಾದ ಕಾರಣದಿಂದ ಕಳೆದ ವರ್ಷ ಸರ್ಕಾರದ ಚಿಂತಕರ ಚಾವಡಿ ನೀತಿ ಆಯೋಗದ ಅಡಿಯಲ್ಲಿ ಸ್ಥಾಪಿಸಲಾದ ಟಿ ಹಕ್ ನೇತೃತ್ವದ ಸಮಿತಿ ಈ ಕಾಯ್ದೆಯನ್ನು ರೂಪಿಸಿದೆ.

ಕರ್ನಾಟಕ, ತೆಲಂಗಾನ, ಬಿಹಾರ್, ಮಧ್ಯಪ್ರದೇಶ್, ಉತ್ತರಪ್ರದೇಶಗಳಲ್ಲಿ ಭೂಮಿಯನ್ನು ಭೋಗ್ಯ ನೀಡುವುದುದನ್ನು ನಿಷೇಧಿಸಲಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited