ನವದೆಹಲಿ : ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ, ಕೃಷಿ ಭೂಮಿ ಭೋಗ್ಯ ಕಾಯ್ದೆ 2016ರನ್ನು ಜಾರಿಗೊಳಿಸಿದೆ. ಈ ಮೂಲಕ ಭಾರತದಲ್ಲಿ ಭೂಮಿ ಭೋಗ್ಯ ನೀಡುವುದು ಕಾನೂನು ಬದ್ದವಾದಂತಾಗಿದೆ. ಇದರಿಂದ ವ್ಯವಸಾಯದಲ್ಲಿ ದಕ್ಷತೆ, ಬಡತನ ನಿರ್ಮೂಲನೆ ಸಾಧ್ಯವಾಗಬಹುದೆಂದು ಸರ್ಕಾರದ ನಿರೀಕ್ಷೆ ಇದೆ. ಮಾದರಿ ಅಧಿನಿಯಮವನ್ನು, ಒಮ್ಮೆ ರಾಜ್ಯಗಳು ಅಂಗೀಕರಿಸಿದರೆ, ಈಗ ಅಸ್ತಿತ್ವದಲ್ಲಿರುವ ಕಾಯಿದೆ ಹೊರಟುಹೋಗಿ, ರಾಜ್ಯದ ಪ್ರಕಟಣೆ ದಿನಾಂಕದಿಂದ ಹೊಸ ಕಾಯಿದೆ ಅಸ್ತಿತ್ವಕ್ಕೆ ಬರಲಿದೆ.
ಈ ಕಾಯ್ದೆಯ ಪ್ರಕಾರ, ಭೂಮಿಯ ಒಡೆಯ ಬಾಡಿಗೆದಾರನ ಜೊತೆ ಕಾನೂನು ಬದ್ಧವಾಗಿ, ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಾಗಿ, ಕೆಲವು ಸಮಯದವರೆಗೆ ಪರಸ್ಪರ ಒಪ್ಪಿದ ನಿಯಮಗಗಳಿಗೆ ಭೋಗ್ಯಒಪ್ಪಂದ ಮಾಡಿಕೊಳ್ಲಬಹುದು.
ಭೂಸ್ವಾದೀನ ಕಾಯ್ದೆ 2013ಕ್ಕೆ ತಿದ್ದುಪಡಿ ತರುವ ಸರ್ಕಾರದ ಪ್ರಯತ್ನಕ್ಕೆ ಸಂಸತ್ತಿನಲ್ಲಿ ಹಿನ್ನಡೆ ಉಂಟಾದ ಕಾರಣದಿಂದ ಕಳೆದ ವರ್ಷ ಸರ್ಕಾರದ ಚಿಂತಕರ ಚಾವಡಿ ನೀತಿ ಆಯೋಗದ ಅಡಿಯಲ್ಲಿ ಸ್ಥಾಪಿಸಲಾದ ಟಿ ಹಕ್ ನೇತೃತ್ವದ ಸಮಿತಿ ಈ ಕಾಯ್ದೆಯನ್ನು ರೂಪಿಸಿದೆ.
ಕರ್ನಾಟಕ, ತೆಲಂಗಾನ, ಬಿಹಾರ್, ಮಧ್ಯಪ್ರದೇಶ್, ಉತ್ತರಪ್ರದೇಶಗಳಲ್ಲಿ ಭೂಮಿಯನ್ನು ಭೋಗ್ಯ ನೀಡುವುದುದನ್ನು ನಿಷೇಧಿಸಲಾಗಿತ್ತು.