ಗೋಕರ್ಣ : ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಮಂಗಳವಾರ ಆಗಮಿಸಿ, ಶ್ರೀ ಮಹಾಬಲೇಶ್ವರ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ 305 ದಿನಗಳ ನಂತರ ಶ್ರೀ ಸವಾರಿಯ ಸಂಚಾರವು ಶ್ರೀ ಕ್ಷೇತ್ರ ಗೋಕರ್ಣದ ಮೂಲಕ ಪ್ರಾರಂಭಗೊಂಡಿದೆ.
ನಮ್ಮ ಮೂಲ ಸ್ಥಾನವಾದ ಸಾರ್ವಭೌಮ ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರು ಮತ್ತು ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿ ಈ ವಿಜಯ ಯಾತ್ರೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಶ್ರೀಗಳವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕೆಯವರು ಪ್ರಕಟಿಸಿರುವ "ಸಂಸ್ಕೃತಿ" ವಿಶೇಷ ಪುರವಣಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ಶ್ರೀ ದೇವಾಲಯದ ವತಿಯಿಂದ ಪ್ರಾರಂಭಗೊಂಡ ನೀರಿನ ಕೊರತೆಯ ಗ್ರಾಮಗಳಿಗೆ ನೀರು ವಿತರಿಸುವ 'ಜೀವಜಲ ಉಚಿತ ವಿತರಣೆ' ಯೋಜನೆಗೆ ಆಶೀರ್ವಾದ ಪೂರ್ವಕ ಶುಭ ಕೋರಿದರು.
ದೇವಾಲಯಕ್ಕಾಗಿ ಶ್ರೀ ಕ್ಷೇತ್ರ ಗೋಕರ್ಣದ ಉಪಾಧಿವ೦ತ ಮಂಡಳಿಯವರು ತಯಾರಿಸುತ್ತಿರುವ ಬೆಳ್ಳಿಯ ರಥ ಕಾಮಗಾರಿಯನ್ನು ಅವಲೋಕಿಸಿ, 'ಇದೊ೦ದು ಸ್ತ್ಯುತ್ಯ ಕಾರ್ಯ, ಕಾಮಗಾರಿ ಬೇಗ ಪೂರ್ಣಗೊಳ್ಳಲಿ' ಎಂದು ಆಶಿಸಿದರು.
ಗೋಕರ್ಣದಿಂದ ಶ್ರೀಗಳು ಕೆಕ್ಕಾರು ಮಠಕ್ಕೆ ತೆರಳಿ, ಅಲ್ಲಿ ಇಂದು ನಡೆಯುವ ಯೋಗಪಟ್ಟಾಭಿಷೇಕ ವಿಶಿಷ್ಟ ವಾರ್ಷಿಕಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಲಿದ್ದಾರೆ.