ಬೆಂಗಳೂರು : ಮುಖ್ಯಮಂತ್ರಿಯಾಗಿ ನಾಲ್ಕನೇ ಹಾಗೂ ಹಣಕಾಸು ಸಚಿವರಾಗಿ 11ನೇ ಬಜೆಟ್ನ ಮಂಡನೆಯನ್ನು ಸಿ ಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದರು. ಡಿವಿಜಿಯವರ ಮಂಕುತಿಮ್ಮನ ಕಗ್ಗದ ಕವನವೊಂದನ್ನು ಹೇಳಿ, ಬಜೆಟ್ ಭಾಷಣವನ್ನು ಪ್ರಾರಂಭಿಸಿದರು.
ಬಜೆಟ್ ನ ಪ್ರಮುಖಾಂದಗಳು ಃ
* 2016-17ನೇ ಸಾಲಿನ ಬಜೆಟ್ ಗಾತ್ರ 1,63,419 ಕೋಟಿ ರೂ
* ಕಲಬುರ್ಗಿಯಲ್ಲಿ 1320 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರ ಸ್ಥಾಪನೆಗೆ ಬಿಡ್
* ಸುವರ್ಣ ಕೃಷಿ ಗ್ರಾಮ ಯೋಜನೆ ಆರಂಭ, 100 ಮಾದರಿ ಕೃಷಿ ಗ್ರಾಮಗಳ ಅಭಿವೃದ್ಧಿಗೆ ಯೋಜನೆ
* ಕೃಷಿ ಇಲಾಖೆಗೆ 4,344 ಕೋಟಿ ರೂ. ಅನುದಾನ
* ಹನಿ ನೀರಾವರಿಗೆ ಪ್ರೋತ್ಸಾಹ ನೀಡಲು, 1 ಲಕ್ಷ ರೈತರಿಗೆ ಶೇ. ೯೦ ರಷ್ಠು ಸಬ್ಸಿಡಿ
* ಕೃಷಿಕರಿಗೆ ಹವಾಮಾನ ಮುನ್ಸೂಚನೆ ನೀಡುವ ಯೋಜನೆಗೆ 3 ಕೋಟಿ ರೂ. ಅನುದಾನ
* ನೀರಾವರಿ ಇಲಾಖೆಗೆ 14,477 ಕೋಟಿ ರೂ. ಅನುದಾನ, ಎತ್ತಿನಹೊಳೆ ಯೋಜನೆಗೆ ಸಮನ್ವಯ ಸಮಿತಿ ರಚನೆ
* ಮಾಹಿತಿ ತಂತ್ರಜ್ಞಾನ-ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆಗೆ 222 ಕೋಟಿ ರೂ.
* ಇ ಆಡಳಿತಕ್ಕೆ 115 ಕೋಟಿ ರೂ. ಅನುದಾನ
* ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ನೀಡಲಾಗುವ ಮಾಸಾಶನ 500 ರಿಂದ 2000 ರೂ.ಗೆ ಹೆಚ್ಚಳ
* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2,503 ಕೋಟಿ ರೂ. ಅನುದಾನ
* ಎಲ್ಇಡಿ ಬಲ್ಬ್, ಹತ್ತಿ ಮೇಲಿನ ತೆರಿಗೆ ಇಳಿಕೆ
* ಬಿಯರ್ ಮೇಲೆ ಅಬಕಾರಿ ಸುಂಕ ಏರಿಕೆ
* ಮದ್ಯ ಮಾರಾಟ ಲೈಸನ್ಸ್ ಶುಲ್ಕ ಶೇ. 25 ರಷ್ಟು ಹೆಚ್ಚಳ
* ದೇಸಿ ಗೋ ತಳಿಗಳ ವೀರ್ಯ ಬ್ಯಾಂಕ್ ಸ್ಥಾಪನೆ, ಸ್ಥಳೀಯ ತಳಿ ಅಭಿವೃದ್ಧಿಗೆ 5 ಕೋಟಿ ರೂ. ಮೀಸಲು
* ಉನ್ನತ ಶಿಕ್ಷಣಕ್ಕೆ 4,651 ಕೋಟಿ ರೂ. ಅನುದಾನ
* ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಎಂ.ಎಂ.ಕಲಬುರ್ಗಿ ಸಂಶೋಧನಾ ಕೇಂದ್ರ ಸ್ಥಾಪನೆ
* ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಡಿಜಿಟಲ್ ಸಾಕ್ಷರತೆ ಉತ್ತೇಜನಕ್ಕೆ ‘ಐಟಿ @ ಸ್ಕೂಲ್ಸ್ ಇನ್ ಕರ್ನಾಟಕ’ ಕಾರ್ಯಕ್ರಮ ಆರಂಭ
* ಇನ್ವೆಸ್ಟ್ ಕರ್ನಾಟಕದ ಮೂಲಕ 1.77 ಲಕ್ಷ ಕೋಟಿ ಬಂಡವಾಳ ಹೂಡಿಕೆ.
* 5 ಸರ್ಕಾರಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಶಿಕ್ಷಣ
* ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 25 ಹಾಸಿಗೆಗಳ ವಿಶೇಷ ಡಯಾಲಿಸಿಸ್ ಘಟಕ ಸ್ಥಾಪನೆ
* ಬೆಂಗಳೂರಿನಲ್ಲಿ 51.56 ಕಿ.ಮೀ. ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 112 ರಸ್ತೆಗಳ ಅಭಿವೃದ್ಧಿ
* ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ., ಘನ ತ್ಯಾಜ್ಯ ನಿರ್ವಹಣೆಗೆ 500 ಕೋಟಿ ರೂ. ಮತ್ತು ಮಳೆ ನೀರು ಚರಂಡಿ ನಿರ್ಮಾಣಕ್ಕೆ 800 ಕೋಟಿ ರೂ.
* ಕಂದಾಯ ಇಲಾಖೆಗೆ 5,532ಕೋಟಿ ರೂ ಪಾಯಿ .ಪಹಣಿ ಪತ್ರ ನೀಡಲು ಆಧಾರ್ ಮಾಹಿತಿ ಬಳಕೆ . ಗ್ರಾಮ ಸಹಾಯಕರ ಧನ 7 ರಿಂದ 10 ಸಾವಿರಕ್ಕೆ ಏರಿಕೆ .