ನವದೆಹಲಿ : ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ಕುರಿತು ಬುಧವಾರ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು, ರೋಹಿತ್ ಆತ್ಮಹತ್ಯೆ ದಲಿತ, ದಲಿತೇರರ ವಿಚಾರವಲ್ಲ. ಕೆಲವರಿಂದ ಈ ವಿಚಾರದಲ್ಲಿ ರಾಜಕೀಯ ಮಾಡುವ ಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೆಲವರು ಹೇಳುತ್ತಿರುವ ಹಾಗೆ ಇದು ದಲಿತ, ದಲಿತೇತರರ ವಿಚಾರವಲ್ಲ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಹಲವು ರಾಜಕೀಯ ಪಕ್ಷಗಳು ಈ ಅತ್ಮಹತ್ಯೆಗೆ ಪರೋಕ್ಷವಾಗಿ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಕಾರಣ ಎಂದು ಆರೋಪ ಮಾಡಿದ್ದವು. ಕಳೆದ ಅಗಸ್ಟ್ ನಲ್ಲಿ ದೇಶದೋಹದ ಚಟುವಟಿಕೆಗಳಲ್ಲಿ ತೊಡಗಿರುವ ಮತ್ತು ಎಬಿವಿಪಿ ಮುಖಂಡರ ಮೇಲೆ ಹಲ್ಲೆ ನಡೆಸಿರುವ ವಿದ್ಯಾರ್ಥಿ ಸಂಘದ ಮೇಲೆ ಕ್ರಮ ಹೈಗೊಳ್ಲಲು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ನಂತರ ಸಹ ಕ್ರಮದ ಬಗ್ಗೆ ವಿಚಾರಣೆ ಮಾಡಿದ್ದರು. ಇದನ್ನ ರಾಜಕೀಯವಾಗಿ ಬಳಸಿಕೊಂಡು ಕೆಲ ರಾಜಕೀಯ ಪಕ್ಷದವರು ಬಂಡಾರು ದತ್ತಾತ್ರೇಯ ರಾಜಿನಾಮೆ ಒತಾಯಿಸಿದ್ದರು.
ಈ ಆರೋಪವನ್ನು ತಳ್ಳಿ ಹಾಕಿದ ಬಿಜೆಪಿ ಮುಖಂಡರು, ಬಂಡಾರು ದತ್ತಾತ್ರೇಯ ಮಾತ್ರವಲ್ಲ ಕಾಂಗ್ರೆಸ್ ಸಂಸದ ಹನುಮಂತ ರಾವ್ ಸಹ ಈ ಕುರಿತು ಪತ್ರ ಬರೆದಿದ್ದರು ಎಂದು ಹೇಳಿದ್ದಾರೆ.
ಮಾನವ ಸಂಪನ್ಮೂಲ ಸಚಿವಾಲಯದಿಂದ ಕಳುಹಿಸಲಾದ ಸತ್ಯಶೋಧನಾ ತಂಡ ಇಂದು ವಾಪಾಸ್ ಬರುವ ನಿರೀಕ್ಷೆ ಇದೆ. ನಂತರ ವರದಿ ಸಲ್ಲಿಸುತ್ತಾರೆ ಎಂದು ಸಚಿವೆ ಹೇಳಿದರು.