ಪಂಜಾಬ್ : ಪಂಜಾಬ್ ನ ಪಠಾನ್ ಕೋಟ್ ಜಿಲ್ಲೆಯ ವಾಯುನೆಲೆಯ ಮೇಲೆ ನಡೆದ ಉಗ್ರ ದಾಳಿಯ ಕುರಿತು ಮಾತನಾಡಿದ ಗೃಹ ಸಚಿವ ರಾಜನಾಥ ಸಿಂಗ್, ಭಾರತ ಯಾವುದೇ ಆಕ್ರಮಣಶೀಲತೆ ಅಥವಾ ಉಗ್ರರ ದಾಳಿಯನ್ನು ಸಹಿಸುವುದಿಲ್ಲ, ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.
ಭಾರತ ಪಾಕಿಸ್ತಾನವನ್ನು ಸೇರಿಸಿ ಎಲ್ಲಾ ದೇಶದೊಡನೆ ಉತ್ತಮ ಮತ್ತು ಸ್ನೇಹ ಸಂಬಂಧ ಹೊಂದಲು ಬಯಸುತ್ತದೆ. ಪಾಕಿಸ್ತಾನ ನಮ್ಮ ನೆರೆಯ ದೇಶ. ನಾವು ಶಾಂತಿ ಬಯಸುತ್ತೇವೆ, ಆದರೆ ಯಾವುದೇ ಉಗ್ರರ ದಾಳಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.
ಗೃಹ ಸಚಿವರು ರಾಷ್ಟ್ರದ ಸಶಸ್ತ್ರ ಪಡೆಗಳ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು .
ಭಾರತೀಯ ಯೋಧರು ಮತ್ತು ಉಗ್ರರ ಮಧ್ಯೆ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಮತ್ತು ಮೂವರು ಯೋಧರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಕೆಲವು ಉಗ್ರರು ವಾಯುನೆಲೆಯಅವರಣದಲ್ಲಿ ಅಡಗಿರುವ ಸಂಶಯ ವ್ಯಕ್ತವಾಗಿದೆ.