Hebbal : ಬಿಜೆಪಿ ಶಾಸಕರಾದ ಆರ್ ಜಗದೀಶ್ ಅವರು ಹೃದಯಾಘಾತದಿಂದ ಸೋಮವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 58 ವಯಸ್ಸಿನ ಜಗದೀಶ್ ಅವರು ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಶಾಸಕರಾಗಿದ್ದರು.
ಜಗದೀಶ್ ಆವರು ಸೋಮವಾರದಂದು ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಹಾಜರಿದ್ದರು. ಮಧ್ಯಾಹ್ನದ ಸುಮಾರಿಗೆ ಹೃದಯಾಘಾತವಾಗಿ, ತಕ್ಷಣ ಆವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿದೆ ನಿಧನ ಹೊಂದಿದರು.
ಶಾಸಕ ಆರ್. ಜಗದೀಶ್ ಆವರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆವರ ಆಪ್ತರೂ ಕೂಡಾ ಆಗಿದ್ದರು.
ವಿಷಯ ತಿಳಿಯುತ್ತಿದಂತೆ ವಿಧಾನಸಭಾ ಕಲಾಪವನ್ನು ಮೊಟಕುಗೊಳಿಸಿದ ಸ್ಪಿಕರ್ ನಿಧನ ಹೊಂದಿದ ಶಾಸಕ ಜಗದೀಶ್ ಆರಿವಗೆ ಸಂತಾಪ ಸೂಚಿಸಿ ನಾಳೆ ನಡೆಯುವ ಕಲಾಪವನ್ನು ಮುಂದೂಡಲಾಯಿತು.