Untitled Document
Sign Up | Login    
Dynamic website and Portals
  
November 16, 2015

ಭಯೋತ್ಪಾದನೆ ನಿರ್ಮೂಲನೆಗೆ ಜಿ-20 ರಾಷ್ಟ್ರಗಳ ನಿರ್ಣಯ

 ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಟರ್ಕಿ : ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಐಸಿಸ್‌ ಭಯೋತ್ಪಾದಕರು ನಡೆಸಿದ ಅಟ್ಟಹಾಸವನ್ನು ಜಿ-20 ಶೃಂಗಸಭೆಯಲ್ಲಿ ಖಂಡಿಸಲಾಯಿತು. ಉಗ್ರವಾದವನ್ನು ನಿಗ್ರಹಿಸಲು ಜಾಗತಿಕ ಮಟ್ಟದಲ್ಲಿ ತುರ್ತಾಗಿ ಸಂಯುಕ್ತ ಪ್ರಯತ್ನಗಳು ನಡೆಯಬೇಕಿವೆ ಎಂದು ವಿಶ್ವ ನಾಯಕರು ಪ್ರತಿಪಾದಿಸಿದ್ದಾರೆ.

ಆರ್ಥಿಕಾಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಕುರಿತು ಚರ್ಚಿಸುವ ಉದ್ದೇಶದಿಂದ ಟರ್ಕಿಯ ಅಂತಾಲಿಯಾದಲ್ಲಿ ಭಾನುವಾರದಿಂದ ಎರಡು ದಿನಗಳ ಜಿ-20 ದೇಶಗಳ ಸಭೆ ಆರಂಭವಾಯಿತಾದರೂ ಅಮೆರಿಕಾ ಅಧ್ಯಕ್ಷ ಬರಾಕ್ ಒಬಮಾ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಭಯೋತ್ಪಾದನೆಯ ಬಗ್ಗೆ ಮಾತನಾಡಿದರು.

ಭಯೋತ್ಪಾದನೆಯ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ಅನೇಕತ್ವವಾದಿ ಮತ್ತು ಮುಕ್ತ ಸಮಾಜಕ್ಕೆ ಹೊಸ ಬೆದರಿಕೆ ಮತ್ತು ಒಂದು ಮಹಾನ್ ಮಾನವ ಸವಾಲು. ಇದನ್ನು ಎದುರಿಸಲು ಯುಎನ್ ಸಕಾರಾತ್ಮಕ ಪಾತ್ರವನ್ನುವಹಿಸಬೇಕೆಂದು ಕರೆ ನೀಡಿದರು.

ಜಾಗತಿಕ ಭಯೋತ್ಪಾದಕ ತಡೆಹಿಡಿಯುವುದಕ್ಕೆ 10 ಅಂಶಗಳ ಪ್ರಸ್ತಾಪವನ್ನು ಮುಂದಿಟ್ಟ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ಮತ್ತು ಧರ್ಮವನ್ನು ಬೇರ್ಪಡಿಸಬೇಕು ಹಾಗೂ ಭಯೋತ್ಪಾದನೆಯನ್ನು ಪ್ರಯೋಜಿಸುವವರು ಮತ್ತು ಬೆಂಬಲಿಗರನ್ನು ಪ್ರತ್ಯೇಕಿಸಬೇಕು ಎಂದು ಒತ್ತಿ ಹೇಳಿದರು.

ಪ್ರಪಂಚ ಸಾಮರಸ್ಯದಿಂದ ವರ್ತಿಸಬೇಕು ಮತ್ತು ರಾಜಕೀಯವನ್ನು ಪರಿಗಣನೆಗಳು ತಗೆದುಕೊೞದೆ ಭಯೋತ್ಪಾದನೆಯ ಬಗ್ಗೆ ಒಂದೇ ಧ್ವನಿಯಿರಬೇಕು ಎಂದು ಹೇಳಿದರು.

ಪ್ಯಾರಿಸ್ ನಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರಿಗೆ ಒಂದು ನಿಮಿಷದ ಮೌನ ಆಚರಿಸಿ ಶೃಂಗಸಭೆಯನ್ನು ಪ್ರಾರಂಭಿಸಲಾಯಿತು.

ಪ್ಯಾರಿಸ್ ದಾಳಿ ನಾಗರಿಕ ಪ್ರಪಂಚದ ಮೇಲೆ ನಡೆದ ದಾಳಿ. ನಾವು ಫ್ರಾನ್ಸ್ ಜೊತೆ ಐಕಮತ್ಯದಲ್ಲಿ ನಿಲ್ಲುತ್ತೇವೆ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited