ಪಟ್ನಾ : ಅಕ್ಟೋಬರ್ 28 ರಂದು ಮೂರನೇ ಹಂತದ ವಿಧಾನಸಭಾ ಚುನಾವಣೆ ನಡೆಯುವ ಬಿಹಾರದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹಲವು ಭರವಸೆಗಳನ್ನು ನೀಡಿದರು.
ಆರಂಭಿಕರಿಗೆ ಮೂರು ಅಂಶಗಳ ಕಾರ್ಯಕ್ರಮ- ವಿದ್ಯುತ್, ನೀರು ಮತ್ತು ರಸ್ತೆ ಎಂದು ಪ್ರಧಾನಿ ಮೋದಿ ಚಪ್ರಾದಲ್ಲಿ ನಡೆದ ಸಭೆಯಲ್ಲಿ ತಿಳಿಸಿದರು.
ಯುವಕರಿಗೆ ಮತ್ತು ಹಿರಿಯರಿಗೆ ಮೂರು ಅಂಶಗಳ ಇನ್ನೊಂದು ಕಾರ್ಯಕ್ರಮವಿರುತ್ತದೆ- ಯುವಕರ ವಿದ್ಯಾಭ್ಯಾಸ, ಯುವಕರ ಉದ್ಯೋಗ ಮತ್ತು ಹಿರಿಯರಿಗೆ ಔಷಧೋಪಚಾರ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಉದ್ಯಮ ಪುನರ್ಜಾಗೃತಿಗೆ ಸಮಿತಿ ರಚಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ನಿತೀಶ್ ಕುಮಾರ ಮತ್ತು ಲಾಲೂ ಪ್ರಸಾದ್ ಯಾದವ್ ಮೇಲೆ ವಾಗ್ದಾಳಿ ನಡೆಸಲು ಅಭಿವೃದ್ಧಿ ವಿಷಯವನ್ನು ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಕಾರ್ಯಸೂಚಿಯಲ್ಲಿ ನಮಗೆ ಇರುವುದು ಒಂದೇ ಅಭಿವೃದ್ಧಿ. ನಮ್ಮ ಚುನಾವಣಾ ಸಭೆಯಲ್ಲಿ ನಾವು ಅಭಿವೃದ್ಧಿ ಬಗ್ಗೆ ಮಾತನಾಡುತ್ತೇವೆ ಆದರೆ ಅವರು ಮಾತನಾಡುವುದು ಒಂದೇ, ಮೋದಿ, ಮೋದಿ, ಮೋದಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ 6 ದಿನಗಳಲ್ಲಿ ಬಿಹಾರದಲ್ಲಿ 17 ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.