BW News Bureau : ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಈಗ ಡಿಜಿಟಲ್ ಸರದಿಗೆ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಮಂಗಳವಾರ ಬೆಂಗಳೂರು ರೈಲ್ವೆ ವಿಭಾಗದ ವಿಭಾಗೀಯ ರೈಲ್ವೇ ಮ್ಯಾನೇಜರ್ ಸಂಜೀವ್ ಅಗರ್ವಾಲ್ ಉದ್ಘಾಟನೆಗೊಳಿಸಿದರು.
ಈ ರೀತಿಯ ವ್ಯವಸ್ಥೆ ಈಗಾಗಲೇ ಮೈಸೂರು, ಶಿವಮೊಗ್ಗ ಮತ್ತು ದಾವಣಗೆರೆ ರೈಲ್ವೆ ನಿಲ್ಗಾಣಗಳಲ್ಲಿವೆ.
ಪ್ರಯಾಣಿಕರು ಟಿಕೇಟ್ ಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಸಮಯವನ್ನು ಕಡಿಮೆ ಮಾಡಲು ಹೊಸ ಡಿಜಿಟಲ್ ಸರದಿಗೆ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನೂಪ್ ದಯಾನಂದ್ ಸಾಧು ತಿಳಿಸಿದ್ದಾರೆ.
ಈ ವ್ಯವಸ್ಥೆಯಲ್ಲಿ ಪ್ರಯಾಣಿಕರು ತಮ್ಮ ಕಾಯ್ದಿರಿಸುವ ವಿನಂತಿ ಚೀಟಿಯನ್ನು ಕೌಂಟರ್ ನಲ್ಲಿರುವ ವ್ಯಕ್ತಿಗೆ ಕೊಡಬೇಕು. ಅವರು ಅದನ್ನು ಪ್ರಿಂಟರ್ ಗೆ ನೀಡುತ್ತಾರೆ. ಆಗ ಅದರಲ್ಲಿ ಟೋಕನ್ ನಂಬರ್, ದಿನಾಂಕ ಮತ್ತು ಸಮಯ ಮುದ್ರಿತವಾಗುತ್ತದೆ.
ಈ ಚಿಟಿಯನ್ನು ಹಿಡಿದುಕೊಂದು ಪ್ರಯಾಣಿಕ ಆಸನ ಪ್ರದೇಶದಲ್ಲಿ ಕಾಯಬಹುದು. ಟೋಕನ್ ನಂಬರ್ ಅನ್ನು ಕೌಂಟರ್ ನ ಮೇಲ್ಬಾಗದಲ್ಲಿ ಮತ್ತು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಆಗ ಪ್ರಯಾಣಿಕ ತನಗೆ ಬಂದ ಕೌಂಟರ್ ಗೆ ಹೋಗಿ ಟಿಕೇಟ್ ಅನ್ನು ಬುಕ್ ಮಾಡಬಹುದು.