ಜಮ್ಮು-ಕಾಶ್ಮೀರ : ಜಮ್ಮು ಕಾಶ್ಮೀರದಲ್ಲಿ ಉಗ್ರರು ತಮ್ಮ ಅಟ್ಟಹಾಸ ಮುಂದುವರಿಸಿದ್ದು, ಬುಧವಾರ ಬಿ ಎಸ್ ಎಫ್ ಬೆಂಗಾವಲು ಪಡೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಯೋಧರು ಮೃತರಾಗಿದ್ದು, ಐದು ಜನ ಯೊಧರು ಗಾಯಗೊಂಡಿದ್ದಾರೆ.
ಉಗ್ರರ ದಾಳಿಗೆ ಪ್ರತಿಯಾಗಿ ನಡೆದ ದಾಳಿಯಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಆದರೆ ಉಳಿದವರು ಅರಣ್ಯದಲ್ಲಿ ಪರಾರಿಯಾಗಿದ್ದು, ಮೂವರು ಸ್ಥಳೀಯರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಉಗ್ರಗಾಮಿಗಳು, ಸೇನಾ ಸಮವಸ್ತ್ರ ಧರಿಸಿದ್ದು, ಉಧಾಮ್ ಪುರ್ ನಿಂದ 10 ಕಿ.ಮೀ ದೂರದಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಿ ಎಸ್ ಎಫ್ ಯೋಧರ ಮೇಲೆ ದಾಳಿ ನಡೆಸಿದ್ದಾರೆ.
ಸೇನಾಪಡೆಗಳು ಉಗ್ರರಿಗಾಗಿ ಹುಡುಕಾಟ ನಡೆಸಿವೆ. ಅಮರನಾಥ ಯಾತ್ರಾರ್ಥಿಗಳು ಈ ಹೆದ್ದಾರಿ ಬಳಸುವುದರಿಂದ ಹೆಚ್ಚಿನ ಕಾಳಜಿವಹಿಸಲಾಗಿದೆ. ಈ ಮೊದಲು ಸಹ ಇಲ್ಲಿ ದಾಳಿಗಳು ನಡೆದಿವೆ.
ಈ ವಿಷಯವಾಗಿ ಟ್ವೀಟ್ ಮಾಡಿದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ತುಂಬಾ ಸಮಯದ ನಂತರ ಈ ಹೆದಾರಿಯಲ್ಲಿ ದಾಳಿ ನಡೆದಿದೆ. ಇದು ಉಗ್ರಗಾಮಿ ಮುಕ್ತ ಪ್ರದೇಶವಾಗಿದ್ದು, ಈ ಬೆಳವಣಿಗೆ ಗಂಭೀರವಾಗಿದೆ ಎಂದು ಹೇಳಿದ್ದಾರೆ.