ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾತ್ರಿ ನಡೆದ ಮಧ್ಯಪ್ರದೇಶದ ಅವಳಿ ರೈಲು ಅಪಘಾತದಲ್ಲಿ ಜೀವಗಳೆದುಕೊಂಡವರ ಬಗ್ಗೆ ತಮ್ಮ ನೋವು ಮತ್ತು ಯಾತನೆಯನ್ನು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಎರಡು ರೈಲು ಅಪಘಾತದ ವಿಷಯ ತಿಳಿದು ಯಾತನೆಯಾಯಿತು. ಜೀವ ಕಳೆದುಕೊಂಡವರ ಬಗ್ಗೆ ನೋವಾಗುತ್ತದೆ. ಮೃತ ವ್ಯಕ್ತಿಗಳ ಕುಟುಂಬಕ್ಕೆ ನನ್ನ ಸಂತಾಪ ಸೂಚಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಗಾಯಗೊಂಡವರಿಗಾಗಿ ಪ್ರಾರ್ಥಿಸುತ್ತೇನೆ. ಸ್ಥಲದಲ್ಲಿ ಅಧಿಕಾರಿಗಳು ಸಾಧ್ಯವಿರುವ ಎಲ್ಲಾ ಕಾರ್ಯಚರಣೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇನ್ನೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ವಾರಣಾಸಿ-ಮುಂಬಯಿ ಮಾರ್ಗದ ಕಾಮಯಾನಿ ಎಕ್ಸ್ ಪ್ರೆಸ್ ರೈಲು ಮಂಗಳವಾರ ರಾತ್ರಿ 11:45 ರ ಸುಮಾರಿಗೆ ಭೋಪಾಲ್ ನಿಂದ 160 ಕಿ.ಮೀ ದೂರದಲ್ಲಿ ಹರ್ದಾ ಬಳಿ ಹಳಿತಪ್ಪಿತ್ತು. ಅದೇ ಸಮಯದಲ್ಲಿ ಪಟನಾದಿಂದ ಮುಂಬಯಿಗೆ ಸಾಗುತ್ತಿದ್ದ ಜನತಾ ಎಕ್ಸ್ ಪ್ರೆಸ್ ಕೂಡ ಅಪಘಾತಕ್ಕೀಡಾಗಿತ್ತು.
ಈ ಘಟನೆಯಲ್ಲಿ ಸುಮಾರು 24ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ವರದಿಯಾಗಿದ್ದು, 300 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.