Untitled Document
Sign Up | Login    
Dynamic website and Portals
  
July 16, 2015

ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ : ತುರ್ತು ಸಭೆ ಕರೆದ ಗೃಹ ಸಚಿವ ರಾಜನಾಥ ಸಿಂಗ್

ಗೃಹ ಸಚಿವ ರಾಜನಾಥ ಸಿಂಗ್ (ಫೈಲ್ ಚಿತ್ರ) ಗೃಹ ಸಚಿವ ರಾಜನಾಥ ಸಿಂಗ್ (ಫೈಲ್ ಚಿತ್ರ)

ನವದೆಹಲಿ : ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಗುಂಡಿನ ಘರ್ಷಣೆ ನಡೆಯುತ್ತಿದೆ. ಈ ಸಂಬಂಧ ಗಡಿ ಪ್ರದೇಶದ ಪರಿಸ್ಥಿತಿ ಅವಲೋಕನಕ್ಕಾಗಿ, ಗೃಹ ಸಚಿವ ರಾಜನಾಥ ಸಿಂಗ್ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರ ಜೊತೆಗೆ ತುರ್ತು ಸಭೆಯನ್ನು ಕರೆದಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವೆಲ್ ಕೂಡಾ ಈ ಉನ್ನತ ಮಟ್ಟದ ಸಭೆಯಲ್ಲಿ ಗುರುವಾರ ಭಾಗವಹಿಸಲಿದ್ದಾರೆ. ಕಳೆದ ಎರಡು ದಿನಗಳಲ್ಲಿ ಭದ್ರತಾ ಮತ್ತು ರಾಜತಾಂತ್ರಿಕ ರಂಗಗಳಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಪೂರ್ಣ ವಿಮರ್ಶೆ ಕೈಗೊಳ್ಳಲು ರಾಜನಾಥ ಸಿಂಗ್ ಈ ಸಭೆ ಕರೆದಿದ್ದಾರೆ.

ಬಿಎಸ್​ಎಫ್ ನ ಮಹಾ ನಿರ್ದೇಶಕ ಡಿ.ಕೆ. ಪಾಠಕ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಭಾರತ- ಪಾಕ್ ಗಡಿಯಲ್ಲಿನ ಭದ್ರತಾ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಪ್ರಧಾನ ಮಂತ್ರಿ ಭೇಟಿಯಾಗಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ನಿರ್ಧರಿಸಿದ ಒಂದು ವಾರದಲ್ಲಿ ಈ ಬೆಳವಣಿಗೆ ನಡೆದಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited