ಬೆಂಗಳೂರು : ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ವಿಧಾನಮಂಡಲ ಮಳೆಗಾಲದ ಅಧಿವೇಶನ ಪೂರ್ಣ ಪ್ರಮಾಣದಲ್ಲಿ ನಡೆಯುವುದು ಅನುಮಾನವಾಗಿದೆ.
ಅಧಿವೇಶನವನ್ನು ಒಟ್ಟು 20 ದಿನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅದರಲ್ಲಿ ಮೊದಲ 10 ದಿನದ ಕಲಾಪ ಬೆಳಗಾವಿಯ ಸೂವರ್ಣ್ ವಿಧಾನಸೌಧದಲ್ಲಿ ಮತ್ತು ಉಳಿದ 10ದಿನ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ನಡುವೆ ಬಿಬಿಎಂಪಿ ಚುನಾವಣೆ ನಿಗದಿಯಾಗಿದೆ. ಈ ನಿತ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಧಿವೇಶನಕ್ಕಿಂತ ಬಿಬಿಎಂಪಿ ಚುನಾವಣೆಯೂ ಮುಖ್ಯವಾಗಿದೆ.
ಈ ಹಿನ್ನಲೆಯಲ್ಲಿ ಅಧಿವೇಶನವನ್ನು 10ದಿನ ಅಥವಾ ಅದಕ್ಕಿಂತಲೂ ಕಡಿಮೆ ದಿನ ನಡೆಸಿದರೆ ಉತ್ತಮ ಎಂಬ ಅಭಿಪ್ರಾಯ ರೆಆಜಕೀಯ ನಾಯಕರಿಂದ ವ್ಯಕ್ತವಾಗಿದೆ.
ಸ್ಪೀಕರ್ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ಕಲಾಪ ಸಲಹಾ ಸಮಿತಿ ಸಭೆ ನಡೆಯಲಿದ್ದು, ಈ ವೇಳೆ ಅಧಿವೇಶನವನ್ನು ಎಷ್ಟು ದಿನ ನಡೆಸಲು ರಾಜಕೀಯ ನಾಯಕರು ಸಿದ್ಧರಾಗಿದ್ದಾರೆ ಎಂಬುದು ತಿಳಿಯಲಿದೆ.
ಮೂಲಗಳ ಪ್ರಕಾರ ಬೆಳಗಾವಿ ಅಧಿವೇಶನವನ್ನು ಐದು ದಿನ ನಡೆಸಿ ಮುಂದಿನ 8 ತಿಂಗಳಿಗೆ ಬಜೆಟ್ ಗೆ ಅನುಮೋದನೆ ಪಡೆದು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಸಲಹೆಯನ್ನು ರಾಜಕೀಯ ಪಕ್ಷಗಳ ನಾಯಕರು ನೀಡಿದರೂ ಅಚ್ಚರಿಯಿಲ್ಲ.