ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಕಣದಲ್ಲಿರುವ ಆರ್ ಕೆ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಆರಂಭವಾಗಿದೆ. ಬೂತ್ ಸಂಖ್ಯೆ 1 ಮತ್ತು 83 ಹೊರತಪಡಿಸಿ ಎಲ್ಲ ಮತಗಟ್ಟೆಗಳಲ್ಲು ಯಾವುದೇ ತೊಂದರೆ ಇಲ್ಲ ವಿದ್ಯುನ್ಮಾನ ಮತಯಂತ್ರಗಳು ಕಾರ್ಯನಿರ್ವಹಿಸಿವೆ. ಆ ಮತಗಟ್ಟೆಗಳಲ್ಲೂ ಕೆಲವು ಕ್ಷಣಗಳ ಬಳಿಕ ಯಂತ್ರಗಳನ್ನು ರಿಪೇರಿ ಮಾಡಲಾಗಿದೆ.
ಜಯಲಲಿತಾ ಅವರನ್ನೂ ಒಳಗೊಂಡಂತೆ 28 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇಷ್ಟೊಂದು ಸ್ಪರ್ಧಿಗಳಿದ್ದರು ನಿಜವಾದ ಸ್ಪರ್ಧೆ ಇರುವುದು ಜಯಲಲಿತಾ ಮತ್ತು ಸಿಪಿಐ ಪಕ್ಷದ ಸಿ ಮಹೇಂದ್ರನ್ ನಡುವೆ ಎನ್ನಲಾಗಿದೆ.
230 ಮತದಾನ ಕೇಂದ್ರದಲ್ಲಿ ಮತದಾನ ನಡೆಯುತ್ತಿದ್ದು , ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯ ಪೊಲೀಸರು ಸೇರಿದಂತೆ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಪಿ ವೆಟ್ರಿವೇಲ್ ಅವರು ರಾಜೀನಾಮೆ ನೀಡಿದ್ದರಿಂದ ಆರ್ ಕೆ ನಗರ ಕ್ಷೇತ್ರಕ್ಕೆ ಮರುಚುನಾವಣೆ ನಡೆಸಲಾಗಿದೆ. ಈ ಹಿಂದೆ 2011ರಲ್ಲಿ ಶ್ರೀರಂಗಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯಯಲಿತ ಮೊದಲಬಾರಿಗೆ ಚೆನ್ನೈನ ಕ್ಷೇತ್ರವೊಂದರಲ್ಲಿ ಸ್ಪರ್ಧಿಸುತ್ತಿರುವುದು. ವಿರೋಧ ಪಕ್ಷಗಳಾದ ಡಿಎಂಕೆ, ಎಂಡಿಎಂಕೆ, ಕಾಂಗ್ರೆಸ್, ಪಿಎಂಕೆ, ವಿಸಿಕೆ, ಟಿಎಂಸಿ ಮತ್ತು ಬಿಜೆಪಿ ನಾಯಕತ್ವದ ಎನ್ ಡಿ ಎ ವಿವಿಧ ಕಾರಣಗಳಿಗಾಗಿ ಸ್ಪರ್ಧೆಯಿಂದ ದೂರವುಳಿದಿವೆ. 2011ರಿಂದ ನಡೆದ ಆರು ಉಪಚುನಾವನೆಗಳಲ್ಲಿ ಎಐಡಿಎಂಕೆ ಜಯಭೇರಿ ಭಾರಿಸಿದೆ. 2.43 ಲಕ್ಷ ಮತದಾರರಿರುವ ಆರ್ ಕೆ ನಗರ ಕ್ಷೇತ್ರದ ಮತ ಎಣಿಕೆ ಜೂನ್ 3೦ ರಂದು ನಡೆಯಲಿದೆ.