Untitled Document
Sign Up | Login    
Dynamic website and Portals
  
May 9, 2015

ದಂತೇವಾಡಾಕ್ಕೆ ಮೋದಿ ಭೇಟಿ: ದಂಡಕಾರಣ್ಯ ಬಂದ್‌ ಗೆ ನಕ್ಸಲರ ಕರೆ

ರಾಯ್ ಪುರ : ಪ್ರಧಾನಿ ನರೇಂದ್ರ ಮೋದಿ ಅವರ ದಂತೇವಾಡಾ ಭೇಟಿಯನ್ನು ಖಂಡಿಸಿ ಛತ್ತೀಸ್‌ ಗಢದ ಬಸ್ತರ್‌ ವಲಯದ ನಕ್ಸಲ್‌ ಗುಂಪುಗಳು ವಿರೋಧಿಸಿದ್ದು, ಈ ಭೇಟಿ ಬಹಿಷ್ಕರಿಸುವಂತೆ ಜನತೆಗೆ ಕರೆ ನೀಡಿವೆ.

ದಂತೇವಾಡದಲ್ಲಿ ಪ್ರಧಾನಿ ಮೋದಿ, ಅಲ್ಟ್ರಾ ಮೆಗಾ ಉಕ್ಕು ಘಟಕ ಮತ್ತು ರಾವ್‌ ಘಾಟ್‌-ಜಗದಲ್‌ ಪುರ ರೈಲ್ವೆ ಮಾರ್ಗದ ಎರಡನೇ ಹಂತವನ್ನೂ ಉದ್ಘಾಟಿಸಲಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಕೈಗೊಳ್ಳಲಾಗಿರುವ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಆದರೆ ಮೋದಿ ಭೇಟಿ ಖಂಡಿಸಿ ನಕ್ಸಲರು ಮೇ 8 ಮತ್ತು 9ರಂದು ’ದಂಡಕಾರಣ್ಯ ಬಂದ್‌' ಆಚರಿಸುತ್ತಿವೆ.

ನಕ್ಸಲ್‌ ಪೀಡಿತ ಕಾಂಕೇರ್‌ ಜಿಲ್ಲೆಯ ಭಾನುಪ್ರತಾಪ್‌ ಪುರ-ಪಾಕಾಹಂಜೋರೆ ಮುಖ್ಯ ರಸ್ತೆಯನ್ನು ಮರಗಿಡಗಳ ಟೊಂಗೆಗಳನ್ನು ಅಡ್ಡವಾಗಿರಿಸಿ ಬಂದ್‌ ಮಾಡಿರುವ ನಕ್ಸಲೀಯರು, ಭದ್ರತಾ ಪಡೆಗಳನ್ನು ಆತಂಕಕ್ಕೀಡು ಮಾಡಿದ್ದಾರೆ. ಕೂಡಲೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ರಸ್ತೆ ತೆರವುಗೊಳಿಸಲು ಶ್ರಮಿಸಿವೆ.

ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಕೇಂದ್ರೀಯ ಪಡೆಗಳು ಸೇರಿದಂತೆ 10 ಸಾವಿರ ಭದ್ರತಾ ಸಿಬ್ಬಂದಿಗಳನ್ನು ದಂತೇವಾಡಾ ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ. ಬಾಂಬ್‌ ನಿಷ್ಕ್ರಿಯ ದಳಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಎಲ್ಲ ಆದಿವಾಸಿ ಮಾರುಕಟ್ಟೆಗಳನ್ನು ಬಂದ್‌ ಮಾಡಿಸಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Protest

ಕೆ ಎಸ್ ಒಯು ಮುಚ್ಚದಂತೆ ಎಬಿವಿಪಿ ಪ್ರತಿಭಟನೆ: ಲಘು ಲಾಠಿ ಪ್ರಹಾರ
  • ಕೆ ಎಸ್ ಒಯು ಮುಚ್ಚದಂತೆ ಎಬಿವಿಪಿ ಪ್ರತಿಭಟನೆ: ಲಘು ಲಾಠಿ ಪ್ರಹಾರ
  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಎಬಿವಿಪಿ ಬೃಹತ್ ಪ್ರತಿಭಟನೆ ಅರಂಭಿಸಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
  • ದೇಶವ್ಯಾಪಿ ಪೆಟ್ರೋಲ್ ಬಂಕ್ ಮುಷ್ಕರ ವಾಪಸ್
  • ಸಿಪಿಎಂ ಕಛೇರಿಗೆ ಮುತ್ತಿಗೆ: ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವರ ಬಂಧನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited