ಕೊಲ್ಕತ್ತಾ : ಪ್ರಧಾನಿ ನರೇಂದ್ರ ಮೋದಿ ಮೇ 9ರಂದು ಕೊಲ್ಕತ್ತಾದಲ್ಲಿ ರಾಮಕೃಷ್ಣ ಮಠದ ಸ್ವಾಮಿ ಆತ್ಮಾಸ್ಥಾನಂದ್ ಮಹಾರಾಜ್ ರನ್ನು ಭೇಟಿ ಮಾಡಲಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕೋಲ್ಕತಾಕ್ಕೆ ಆಗಮಿಸುತ್ತಿರುವ ಮೋದಿ, ಇದೇ ವೇಳೆ ವೃದ್ಧಾಪ್ಯದ ಸಮಸ್ಯೆಯಿಂದ ಬಳುತ್ತಿರುವ ತಮ್ಮ ಗುರು ಆತ್ಮಾಸ್ಥಾನಂದ ಅವರನ್ನು ಭೇಟಿ ಮಾಡಲಿದ್ದಾರೆ. ಸ್ವಾಮಿಗಳು ರಾಜ್ ಕೋಟ್ ನಲ್ಲಿದ್ದಾಗ ಮೋದಿ, ಅವರ ಬಳಿ ಆಗಾಗ ತೆರಳಿ ಸಲಹೆ ಪಡೆಯುತ್ತಿದ್ದರು.
ರಾಮಕೃಷ್ಣ ಮಠದ ಕೇಂದ್ರ ಕಚೇರಿ ಇರುವ ಬೇಲೂರು ಮಠಕ್ಕೆ 2013ರಲ್ಲಿ ಮೋದಿ ತೆರಳಿ, ಅಲ್ಲಿ ವಿವೇಕಾನಂದರು ವಾಸವಿದ್ದ ಕೊಠಡಿಯಲ್ಲಿ ಕೆಲ ಕಾಲ ಧ್ಯಾನ ಮಾಡಿದ್ದರು. ಬಾಲ್ಯದಲ್ಲಿ ಮೋದಿ ಈ ಮಠ ಸೇರಲು ಬಯಸಿದ್ದರು. ಆದರೆ ಸ್ವಾಮಿಗಳು ಬೇರೆ ಕಾರ್ಯದಲ್ಲಿ ತೊಡಗಲು ಸೂಚಿಸಿದ್ದರು.