ನವದೆಹಲಿ : ಉತ್ತರ ಭಾರತ ಹಾಗೂ ನೇಪಾಳದಾದ್ಯಂತ ಸಂಭವಿಸಿದ ಪ್ರಬಲ ಭೂಕಂಪ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ತುರ್ತು ಸಭೆ ಅಂತ್ಯಗೊಂಡಿದೆ.
ತುರ್ತು ಸಭೆಯಲ್ಲಿ ಭೂಕಂಪ ಸಂತ್ರಸ್ತರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ಸಭೆಯಲ್ಲಿ ನೇಪಾಳಕ್ಕೆ ನೆರವು ನೀಡುವ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ.
ನೇಪಾಳಕ್ಕೆ ನೆರವು ನೀಡುವ ಸಲುವಾಗಿ ಭಾರತದಿಂದ ನೇಪಾಳಕ್ಕೆ 2 ವಿಶೇಷ ವಿಮಾನಗಳು ರವಾನೆಯಾಗಿವೆ. ವಿಮಾನದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 40 ತಜ್ಞರು ಹಾಗೂ 4 ಟನ್ ಔಷಧಿಗಳು ಕಳುಹಿಸಿಕೊಡಲಾಗುತ್ತಿದೆ. ಸಿ.130ಜೆ ಸೂಪರ್ ಹರ್ಕ್ಯುಲಸ್ ಎಂಬ ವಿಶೇಷ ವಿಮಾನವನ್ನು ಕಳುಹಿಸಿಕೊಡಲಾಗಿದೆ.