ರಾಯ್ ಪುರ್ : ಛತ್ತೀಸ್ ಗಢದ ಕಾಂಕೇರ್ ಜಿಲ್ಲೆಯಲ್ಲಿ ನಕ್ಸಲೀಯರು ತಮ್ಮ ಅಟ್ಟಹಾಸ ಮುಂದುವರಿಸಿದ್ದು, ನಕ್ಸಲ್ ದಾಳಿಗೆ ಬಿ.ಎಸ್.ಎಫ್ ಜವಾನನೊಬ್ಬ ಸಾವನ್ನಪ್ಪಿದ್ದಾರೆ.
ಛೋಟೆ ಭಾಯ್ ತಿಯಾ ಬಿ.ಎಸ್.ಎಫ್ ಕ್ಯಾಂಪ್ ನಡಿಯಲ್ಲಿ ಬರುವ ಬಾಂಡೆ ಪೊಲೀಸ್ ಠಾಣೆ ಪ್ರದೇಶದಲ್ಲಿ ಮಾವೋವಾದಿಗಳು ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು ಎಂದು ಕಾಂಕೇರ್ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಸಿಂಗ್ ಮೀನಾ ತಿಳಿಸಿದ್ದಾರೆ.
ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದಾಗಲೇ ನಕ್ಸಲ್ ತಂಡ ದಟ್ಟ ಕಾಡಿನೊಳಗೆ ಪರಾರಿಯಾಗಿದೆ ಎಂದು ಹೇಳಿದ್ದಾರೆ. ಈ ದಾಳಿಯಲ್ಲಿ ಓರ್ವ ಪೊಲೀಸ್ ಸಾವನ್ನಪ್ಪಿದ್ದಾರೆ.
ಶನಿವಾರ ನಕ್ಸಲೀಯರು ನಡೆಸಿದ ದಾಳಿಯಲ್ಲಿ ಏಳು ಪೊಲೀಸರನ್ನು ಹತ್ಯೆಗೈದಿದ್ದರು. ಭಾನುವಾರ ಕಾಂಕೇರ್ ಜಿಲ್ಲೆಯಲ್ಲಿ ಸುಮಾರು 17 ಅದಿರು ಲಾರಿಗಳನ್ನು ಬೆಂಕಿಹಚ್ಚಿ ಸುಟ್ಟಿದ್ದರು. ಈಗ ಮೂರು ದಿನಗಳಲ್ಲಿ ಮೂರನೇಬಾರಿಗೆ ನಕ್ಸಲರು ದಾಳಿ ನಡೆಸಿದ್ದಾರೆ.