ಬೀಜಿಂಗ್ : 'ಅರುಣಾಚಲಪ್ರದೇಶ' ತನ್ನದೇ ಭಾಗ ಎಂದು ವಾದಿಸುತ್ತಿದ್ದ ಚೀನಾ ಇದೀಗ ತನ್ನ ವರಸೆಯನ್ನು ಬದಲಿಸಿದ್ದು ಅರುಣಾಚಲ ಪ್ರದೇಶದ ವಿಚಾರವಾಗಿ ಭಾರತದೊಂದಿಗೆ ವಿವಾದ ಇರುವುದು ನಿರಾಕರಿಸಲಾಗದ ವಾಸ್ತವ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯವನ್ನೇ ಪುನರುಚ್ಚರಿಸಿರುವ ಚೀನಾ, ಅರುಣಾಚಲ ಪ್ರದೇಶದ ವಿವಾದವನ್ನು ಬಗೆಹರಿಸಿಕೊಳ್ಳಲು ಉಭಯ ರಾಷ್ಟ್ರಗಳೂ ಅನುಕೂಲಕರ ವಾತಾವರಣವನ್ನು ನಿರ್ಮಿಸಬೇಕಿರುವುದು ಅಗತ್ಯವಿದೆ ಎಂದು ಹೇಳಿದೆ.
ಭಾರತ ಸರ್ಕಾರ ಅರುಣಾಚಲಪ್ರದೇಶದಲ್ಲಿ ಎ.ಎಫ್.ಎಸ್.ಪಿ.ಎ ಕಾಯ್ದೆಯನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರ, ಚೀನಾ-ಭಾರತದ ಈಶಾನ್ಯ ಗಡಿಗೆ ಸಂಬಂಧಿಸಿದಂತೆ ವಿವಾದ ಇರುವುದು ನಿಜ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು, ಉಭಯ ರಾಷ್ಟ್ರಗಳೂ ಅನುಕೂಲಕರ ವಾತಾವರಣವನ್ನು ನಿರ್ಮಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಷ್ಟು ದಿನ ಅರುಣಾಚಲಪ್ರದೇಶದ ಭೂಭಾಗ ತನ್ನದೇ ಎಂದು ಚೀನಾ ವಾದಿಸುತ್ತಿತ್ತು. ಆದರೆ ಇದೀಗ ಗಡೀ ವಿವಾದವನ್ನು ಬಗೆಹರಿಸಿಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದೆ.