ಪಾಟ್ನಾ : ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಬಲಿಗರು ತಮಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ಮಾಜಿ ಸಿಎಂ ಜೀತನ್ ರಾಂ ಮಾಂಝೀ ಆರೋಪಿಸಿದ್ದಾರೆ.
ನಾನು ಮನಸ್ಸು ಬಿಚ್ಚಿ ಮಾತನಾಡಿದಾಗಲೆಲ್ಲಾ, ನನಗೆ ತಲೆ ಕೆಟ್ಟಿದೆ ಎಂದು ನಿತೀಶ್ ಕುಮಾರ್ ಮತ್ತು ಅವರ ಭಂಟರು ಆರೋಪಿಸುತ್ತಾರೆ. ನಾನು ಬಾಯಿಗೆ ಬಂದಂತೆ ಮಾತನಾಡುತ್ತೇನೆ ಎಂದೆಲ್ಲಾ ವ್ಯಂಗ್ಯವಾಡುತ್ತಾರೆ ಎಂದು ಹೇಳಿದ್ದಾರೆ.
ಅಲ್ಲದೇ, ಇನ್ನು ಮುಂದೇನಾದರೂ, ನೀವು ಹೀಗೆ ಮಾತನಾಡಿದರೆ ನಿಮ್ಮನ್ನು ಹತ್ಯೆ ಮಾಡುತ್ತೇನೆ ಎಂದು ನಿತೀಶ್ ಅವರ ಭಂಟನೊಬ್ಬ ತಮಗೆ ಬೆದರಿಕೆಯನ್ನೂ ಹಾಕಿದ್ದ ಎಂದು ಕಾರ್ಯಕ್ರಮವೊಂದರ ವೇಳೆ ಮಾತನಾಡುವಾಗ ಮಾಂಝೀ ದೂರಿದ್ದಾರೆ.