ನವದೆಹಲಿ : 'ಕೇಂದ್ರ ಬಜೆಟ್' ಅಧಿವೇಶನದ ಎರಡನೇ ಭಾಗ ಪ್ರಾರಂಭವಾಗುವುದಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ.
ಎರಡನೇ ಹಂತದ ಸಚಿವ ಸಂಪುಟ ಪುನಾರಚನೆಯಲ್ಲಿ ಪಿಡಿಪಿ, ಶಿವಸೇನೆಯ ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಂಡು, ಸರಿಯಾಗಿ ಕೆಲಸ ನಿರ್ವಹಿಸದೇ ಇರುವ ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಏ.3ರಂದು ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಸಚಿವ ಸಂಪುಟ ಪುನಾರಚನೆಯಾಗಲಿದೆ.
ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಈ ಬಾರಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಪಿಡಿಪಿ ಸಂಸದರಿಗೂ ಸ್ಥಾನ ದೊರೆಯುವ ನಿರೀಕ್ಷೆ ಇದೆ. ಜಮ್ಮು-ಕಾಶ್ಮೀರದ ಸಿ.ಎಂ ಮುಫ್ತಿ ಮೊಹಮದ್ ಪುತ್ರಿ ಮೆಹಬೂಬಾ ಮುಫ್ತಿ ಕೇಂದ್ರ ಸಚಿವರಾಗಲಿದ್ದಾರೆ ಎಂಬ ವದಂತಿ ಹಬ್ಬಿದೆ.
ಸಂಪುಟ ಪುನಾರಚನೆಯನ್ನೇ ಮುಂದಿಟ್ಟುಕೊಂಡು, ನಿರೀಕ್ಷೆಗೆ ತಕ್ಕಂತ ಕೆಲಸ ಮಾಡದ ಸಚಿವರನ್ನೂ ಸಂಪುಟದಿಂದ ಹೊರಕಳಿಸಲು ಪ್ರಧಾನಿ ಮೋದಿ ಯೋಜನೆ ರೂಪಿಸಿದ್ದಾರೆ. ವಯೋಮಿತಿಯ ಕಾರಣದಿಂದ ಕೇಂದ್ರಸಚಿವೆ ನಜ್ಮಾ ಹೆಫ್ತುಲ್ಲಾಗೆ ಕೋಕ್ ನೀಡಿ, ರಾಜ್ಯಪಾಲರನ್ನಾಗಿ ನೇಮೆಕ ಮಾಡಲಾಗುತ್ತದೆ. ಇನ್ನು ಮುಕ್ತಾರ್ ಅಬ್ಬಾಸ್ ನಖ್ವಿಗೆ ಅಲ್ಪಸಂಖ್ಯಾತ ಸಚಿಲಾಯದ ಸ್ವತಂತ್ರ ನಿರ್ವಣೆಯನ್ನು ನೀಡಲಾಗುತ್ತದೆ ಎಂದು ಪಕ್ಷದ ಹಿರಿಯ ಮುಖಂಡರು ತಿಳಿಸಿದ್ದಾರೆ.
2014ರ ನವೆಂಬರ್ ನಲ್ಲಿ ಪ್ರಧಾನಿ ಮೋದಿ ಮೊದಲ ಬಾರಿಗೆ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದರು.