Untitled Document
Sign Up | Login    
Dynamic website and Portals
  
March 29, 2015

ಮಿಜೋರಂ ರಾಜ್ಯಪಾಲ ಅಜೀಜ್‌ ಖುರೇಶಿ ವಜಾ

ಮಿಜೋರಂ : ರಾಜೀನಾಮೆ ನೀಡುವಂತೆ ಸೂಚಿಸಿದ್ದ ಕೇಂದ್ರ ಸರ್ಕಾರದ ಜತೆ ಸಂಘರ್ಷಕ್ಕಿಳಿದು, ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ ಮಿಜೋರಂ ರಾಜ್ಯಪಾಲ ಅಜೀಜ್‌ ಖುರೇಶಿ ಅವರನ್ನು ವಜಾಗೊಳಿಸಲಾಗಿದೆ. ಈ ಕುರಿತು ರಾಷ್ಟ್ರಪತಿ ಭವನ ಪ್ರಕಟಣೆ ಹೊರಡಿಸಿದೆ.

ಖುರೇಶಿ ಅವರಿಂದ ತೆರವಾಗಿರುವ ಮಿಜೋರಂ ರಾಜ್ಯಪಾಲ ಹುದ್ದೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಕೇಸರಿ ನಾಥ ತ್ರಿಪಾಠಿ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ಇದರೊಂದಿಗೆ, ಪುಟ್ಟರಾಜ್ಯ ಮಿಜೋರಂ ಕೇವಲ 9 ತಿಂಗಳ ಅವಧಿಯಲ್ಲಿ ಏಳನೇ ರಾಜ್ಯಪಾಲರನ್ನು ಕಾಣುವಂತಾಗಿದೆ.

ಯುಪಿಎ ಅವಧಿಯಲ್ಲಿ ಉತ್ತರಾಖಂಡ ರಾಜ್ಯಪಾಲರಾಗಿ ನೇಮಕಗೊಂಡಿದ್ದ ಖುರೇಶಿ ಅವರು ಎನ್‌ಡಿಎ ಸರ್ಕಾರ ಅಧಿಕಾರಕ್ಕೇರಿದ ಬಳಿಕ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮಿಜೋರಂಗೆ ವರ್ಗಾಯಿಸಲಾಗಿತ್ತು. ಅವರ ಅವಧಿ 2017ರವರೆಗೂ ಇತ್ತು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ವಜಾಗೊಳ್ಳುತ್ತಿರುವ ಎರಡನೇ ರಾಜ್ಯಪಾಲ ಖುರೇಶಿ ಅವರಾಗಿದ್ದಾರೆ. ಈ ಮೊದಲು ಕಮಲಾ ಬೇನಿವಾಲ್‌ ಅವರನ್ನು ಮಿಜೋರಂಗೆ ವರ್ಗಾಯಿಸಿ, ಹುದ್ದೆಯಿಂದ ವಜಾ ಮಾಡಲಾಗಿತ್ತು. ಪುದುಚೇರಿಯ ಉಪರಾಜ್ಯಪಾಲ ವೀರೇಂದ್ರ ಕಟಾರಿಯಾ ಅವರನ್ನೂ ವಜಾ ಮಾಡಲಾಗಿತ್ತು.

ಕೇಂದ್ರ ಸರ್ಕಾರದ ಸೂಚನೆ ಪಾಲಿಸಿ ಎಂ.ಕೆ. ನಾರಾಯಣನ್‌ (ಪಶ್ಚಿಮ ಬಂಗಾಳ), ಅಶ್ವನಿ ಕುಮಾರ್‌ (ನಾಗಾಲ್ಯಾಂಡ್‌), ಬಿ.ಎಲ್‌. ಜೋಶಿ (ಉತ್ತರಪ್ರದೇಶ), ಶೇಖರ್‌ ದತ್‌ (ಛತ್ತೀಸ್‌ಗಢ), ಬಿ.ವಿ. ವಾಂಛೂ (ಗೋವಾ) ಅವರು ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಕೆ. ಶಂಕರನಾರಾಯಣ ಅವರನ್ನು ಮಿಜೋರಂಗೆ ವರ್ಗಾಯಿಸಲಾಗಿತ್ತು. ಬಳಿಕ ಅವರೇ ರಾಜೀನಾಮೆ ನೀಡಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited