ತುಮಕೂರು : ಸತೀಶ್ ಜಾರಕಿಹೊಳಿ ರಾಜೀನಾಮೆ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಒಬ್ಬರ
ರಾಜೀನಾಮೆಯಿಂದ ಸರ್ಕಾರ ಅಭದ್ರವಾಗಲ್ಲ ಎದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಸತಿಶ್ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ನಮ್ಮ ಸರ್ಕಾರ ಸುಭದ್ರವಾಗಿದೆ. ಕಾಂಗ್ರೆಸ್ ಸಂಪುಟದಲ್ಲಿ ಯಾವುದೇ ಬಿಕ್ಕಟ್ಟಿಲ್ಲ. ಬೇರೆ ಯಾವ ಸಚಿವರೂ ರಾಜೀನಾಮೆ ನೀಡಲ್ಲ ಎಂದು ಸ್ಪಷ್ಟಪಡಿಸಿದರು.
ಗೃಹ ಸಚಿವರ ಆಪ್ತ ಸಲಹೆಗಾರ ಕೆಂಪಯ್ಯರನ್ನು ಜಾರಕಿಹೊಳಿ ಮನೆಗೆ ನಾನು ಕಳುಹಿಸಿಲ್ಲ. ಜಾರಕಿಹೊಳಿ ಜತೆ ನಿನ್ನೆ ಮಾತನಾಡಿದ್ದೇನೆ. ಇಂದು ಬೆಂಗಳೂರಿನಲ್ಲಿ ಮತ್ತೆ ಮಾತುಕತೆ ನಡೆಯಲಿದೆ ಎಂದು ಹೇಳಿದರು.
ಇದೇ ವೇಳೆ ಸಿದ್ದರಾಅಯ್ಯರನು ಡಿಸಿಎಂ ಮಾಡಿ ತಪ್ಪು ಮಾಡಿದೆ ಎಂಬ ಹೆಚ್.ಡಿ.ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಡಿಸಿಎಂ ಮಾಡಿದ್ದು ದೇವೇಗೌಡರಲ್ಲ. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಯಾರು? ಇದನ್ನು ಅವರು ನೆನಪಿಸಿಕೊಳ್ಳಲಿ. ದೇವೇಗೌಡರನ್ನು ಸಿಎಂ ಮಾಡಿ ನಾವು ತಪ್ಪು ಮಾಡಿದೆವು ಎಂದು ತಿರುಗೇಟು ನೀಡಿದರು.